ಉಪರಾಷ್ಟ್ರಪತಿಗಳ ಕಾರ್ಯಾಲಯ

ತಮ್ಮ ಚೊಚ್ಚಲ ಮಹಾರಾಷ್ಟ್ರ ಭೇಟಿಗಾಗಿ ಮುಂಬೈಗೆ ಆಗಮಿಸಿದ ಉಪರಾಷ್ಟ್ರಪತಿ


ನಗರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಉಪ ರಾಷ್ಟ್ರಪತಿ

'ಆದಿತ್ಯ ಬಿರ್ಲಾ ಸ್ಮಾರಕ ಪೊಲೊ ಕಪ್' ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾದ ಶ್ರೀ ಧನಕರ್ 

Posted On: 14 JAN 2023 7:12PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಮತ್ತು ಡಾ. ಸುದೇಶ್ ಧನಕರ್ ಅವರಿಂದು ಮುಂಬೈಗೆ ಆಗಮಿಸಿದರು. ಉಪರಾಷ್ಟ್ರಪತಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಧನಕರ್ ಅವರು ಮಹಾರಾಷ್ಟ್ರ ರಾಜ್ಯಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ, ಮಹಾರಾಷ್ಟ್ರ ಸರ್ಕಾರದ ಸಚಿವ ಶ್ರೀ ಮಂಗಲ್ ಪ್ರಭಾತ್ ಲೋಧಾ ಮತ್ತು ಇತರ ಗಣ್ಯರು ಸ್ವಾಗತಿಸಿದರು.

ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಉಪರಾಷ್ಟ್ರಪತಿಯವರು ತಮ್ಮ ಮುಂಬೈ ಭೇಟಿಯನ್ನು ಪ್ರಾರಂಭಿಸಿದರು, ಅಲ್ಲಿ ಅವರು ಡಾ.ಸುದೇಶ್ ಧನಕರ್ ಅವರೊಂದಿಗೆ ರಾಷ್ಟ್ರದ ಸಮೃದ್ಧಿ ಮತ್ತು ಎಲ್ಲಾ ನಾಗರಿಕರ ಯೋಗಕ್ಷೇಮಕ್ಕಾಗಿ ಪ್ರಾರ್ಥಿನೆ ಸಲ್ಲಿಸಿದರು.

ನಂತರ ಆದಿತ್ಯ ಬಿರ್ಲಾ ಸಮೂಹದ ಪ್ರಾಯೋಜಕತ್ವದಲ್ಲಿ ಅಮೆಚೂರ್ ರೈಡರ್ಸ್ ಕ್ಲಬ್ ಆಯೋಜಿಸಿದ್ದ ವಾರ್ಷಿಕ 'ಆದಿತ್ಯ ಬಿರ್ಲಾ ಸ್ಮಾರಕ ಪೊಲೊ ಕಪ್' ಚಾಂಪಿಯನ್ ಶಿಪ್ ನಲ್ಲಿ ಶ್ರೀ ಧನಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮನಮೋಹಕವಾದ ಆಟಕ್ಕೆ ಸಾಕ್ಷಿಯಾದ ನಂತರ, ಅವರು ಆಟಗಾರರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಕ್ರೀಡಾ ಮನೋಭಾವವನ್ನು ಶ್ಲಾಘಿಸಿದರು.

ಮಾನ್ಯ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಮುಂಬೈನ ರಾಯಲ್ ವೆಸ್ಟರ್ನ್ ಇಂಡಿಯಾ ಟರ್ಫ್ ಕ್ಲಬ್ ಮೈದಾನದಲ್ಲಿ ನಡೆದ ವಾರ್ಷಿಕ 'ಆದಿತ್ಯ ಬಿರ್ಲಾ ಸ್ಮಾರಕ ಪೋಲೊ ಕಪ್' ಚಾಂಪಿಯನ್ ಶಿಪ್ ನಲ್ಲಿ ಭಾಗಯಾಗಿದ್ದರು. http://@AdityaBirlaGrp @BSKoshyari pic.twitter.com/7Khnr4i7pk
— ಭಾರತದ ಉಪ ರಾಷ್ಟ್ರಪತಿಯವರು (@VPSecretariat) ಜನವರಿ 14, 2023

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ, ಫಿಕ್ಕಿ (ಎಫ್ಐಸಿಸಿಐ) ಅಧ್ಯಕ್ಷೆ- ಆದಿತ್ಯ ಬಿರ್ಲಾ ಉತ್ಕೃಷ್ಟತೆಯ ಸಿ.ಎಸ್.ಆರ್. ಕೇಂದ್ರದ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ಬಿರ್ಲಾ, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಶ್ರೀ ಕುಮಾರ ಮಂಗಲಂ ಬಿರ್ಲಾ, ಪಿರಮಾಲ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಆನಂದ್ ಪಿರಮಾಲ್ ಮತ್ತು ಇತರ ಗಣ್ಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

*****



(Release ID: 1891293) Visitor Counter : 100