ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಸಕ್ಕರೆ ರಫ್ತುದಾರರು ಮತ್ತು ಗಿರಣಿದಾರರಿಗೆ ರಫ್ತು ಆದೇಶಗಳನ್ನು (ಇಆರ್‌ಒ) ಪಡೆಯಲು ಅರ್ಜಿ ಸಲ್ಲಿಸಲು ಕೇಂದ್ರವು ಸಾಕಷ್ಟು ಸಮಯವನ್ನು ನೀಡಿತ್ತು.


ಸಕ್ಕರೆ ಕಾರ್ಖಾನೆಗಳು ಮತ್ತು ರಫ್ತುದಾರರಿಗೆ ಸೂಚನೆಗಳನ್ನು ನೀಡಲಾಗಿದೆ ಮತ್ತು ಡಿಎಫ್‌ಪಿಡಿ ಯ ಜಾಲತಾಣದಲ್ಲಿ ನೀಡಲಾಗಿದೆ

ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ಸಕಾಲದಲ್ಲಿ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ

3ನೇ ಜೂನ್ 2022 ರವರೆಗೆ 23 ಎಲ್‌ಎಮ್‌ಟಿ ಗಿಂತ ಹೆಚ್ಚಿನ ಪ್ರಮಾಣಕ್ಕಾಗಿ ಸಕ್ಕರೆ ಕಾರ್ಖಾನೆಗಳು / ರಫ್ತುದಾರರಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸ್ವೀಕರಿಸಲಾಗಿದೆ.







Posted On: 08 JUN 2022 5:39PM by PIB Bengaluru

ಭಾರತ ಸರ್ಕಾರವು ಸಕ್ಕರೆ ರಫ್ತುದಾರರು ಮತ್ತು ಗಿರಣಿದಾರರಿಗೆ 100 ಎಲ್ಎಮ್‌ಟಿ  ಮೀರಿದ ಸಕ್ಕರೆಯ ರಫ್ತಿನ ಮೇಲಿನ ನಿರ್ಬಂಧಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ (ಎನ್‌ಎಸ್‌ಡಬ್ಲ್ಯೂ ಎಸ್‌) ತಮ್ಮ ಅರ್ಜಿಯನ್ನು ಸಲ್ಲಿಸಲು ಸಾಕಷ್ಟು ಸಮಯವನ್ನು ನೀಡಿತು.

 

ಸಕ್ಕರೆ ರಫ್ತಿನಲ್ಲಿ ಹಿಂದೆಂದೂ ಕಂಡಿಲ್ಲದ ಬೆಳವಣಿಗೆ ಮತ್ತು ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಕಾಯ್ದುಕೊಳ್ಳುವ ಅಗತ್ಯತೆ ಮತ್ತು ಸಕ್ಕರೆ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ದೇಶದ ಸಾಮಾನ್ಯ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವ ಅಗತ್ಯವನ್ನು ಪರಿಗಣಿಸಿ, ಭಾರತ ಸರ್ಕಾರವು ಸಕ್ಕರೆ ರಫ್ತುಗಳನ್ನು ನಿಯಂತ್ರಿಸಲು ನಿರ್ಧರಿಸಿದೆ.  ಡಬ್ಲ್ಯೂ.ಇ.ಎಫ್. 01 ಜೂನ್ 2022 ಮತ್ತು 100 ಎಲ್‌ಎಮ್‌ಟಿಗೂ ಮೀರಿದ ಸಕ್ಕರೆ ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿದೆ.

 

ಸಕ್ಕರೆ ಮತ್ತು ವನಸ್ಪತಿ  ನಿರ್ದೇಶನಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್‌ಪಿಡಿ) ದಿನಾಂಕ 24.05.2022ರ ಪತ್ರದ ಮೂಲಕ ರಫ್ತು ಆದೇಶಗಳ (ಇಆರ್‌ಒ) ರೂಪದಲ್ಲಿ ಅನುಮೋದನೆಗಳನ್ನು ಪಡೆಯಲು ಎನ್‌ಎಸ್‌ಡಬ್ಲ್ಯೂ ಎಸ್‌  ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಸಕ್ಕರೆ ಕಾರ್ಖಾನೆಗಳು ಮತ್ತು ರಫ್ತುದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

ಎಲ್ಲಾ ಸಕ್ಕರೆ ರಫ್ತುದಾರರು ಮತ್ತು ಗಿರಣಿದಾರರು  ಎನ್‌ಎಸ್‌ಡಬ್ಲ್ಯೂ ಎಸ್‌  ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಲು ತಿಳಿಸಲಾಯಿತು ಮತ್ತು ಜೂನ್ 1 ರಂದು ಪೋರ್ಟಲ್ ತೆರೆಯಲಾಗುವುದು ಎಂದು ತಿಳಿಸಲಾಯಿತು.  ಮುಖ್ಯವಾಗಿ, ಅರ್ಜಿಯನ್ನು ಸಿದ್ಧಪಡಿಸಲು ಮತ್ತು ನಂತರ ಅದನ್ನು ಸಲ್ಲಿಸಲು ಸಾಕಷ್ಟು ಸಮಯವಿತ್ತು.

 

ಸಕ್ಕರೆ ಕಾರ್ಖಾನೆಗಳು ಮತ್ತು ರಫ್ತುದಾರರಿಗೆ ಸೂಚನೆಗಳನ್ನು ನೀಡಲಾಗಿದೆ ಮತ್ತು ಡಿಎಫ್‌ಪಿಡಿ  ಯ ಜಾಲತಾಣದಲ್ಲಿ ನೀಡಲಾಗಿದೆ. ಅರ್ಜಿಗಳನ್ನು ಮೊದಲು ಬಂದವರಿಗೆ ಆದ್ಯತೆಯ ಆಧಾರದ ಮೇಲೆ ಸಕಾಲದಲ್ಲಿ ಪ್ರಕ್ರಿಯೆಗೊಳಿಸಲಾಯಿತು. 2022 ರ ಜೂನ್ 3 ರವರೆಗೆ 23 ಎಲ್‌ಎಮ್‌ಟಿ ಗಿಂತ ಹೆಚ್ಚಿನ ಪ್ರಮಾಣಕ್ಕಾಗಿ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸಕ್ಕರೆ ಕಾರ್ಖಾನೆಗಳು / ರಫ್ತುದಾರರಿಂದ ಸ್ವೀಕರಿಸಲಾಗಿದೆ ಮತ್ತು ಸಕ್ಕರೆ ಕಾರ್ಖಾನೆಗಳು / ರಫ್ತುದಾರರಿಗೆ ವಿತರಿಸಲು ಕೇವಲ 10 ಎಲ್‌ಎಮ್‌ಟಿ ಯನ್ನು ವಿತರಿಸಲು ಸಾಧ್ಯವಿರುವುದರಿಂದ, 3ನೇ ಜೂನ್ 2022 ರವರೆಗೆ ಸಕ್ಕರೆ ಕಾರ್ಖಾನೆಗಳು / ರಫ್ತುದಾರರಿಂದ ಅರ್ಜಿಗಳನ್ನು ಸ್ವೀಕರಿಸಿದ ಅನುಪಾತದ ಆಧಾರದ ಮೇಲೆ ಕೇವಲ 10 ಎಲ್‌ಎಮ್‌ಟಿ ಪ್ರಮಾಣವನ್ನು ವಿತರಿಸಲು ನಿರ್ಧರಿಸಲಾಯಿತು. 

 

ಕಳೆದ ಕೆಲವು ವರ್ಷಗಳಲ್ಲಿ ಸಹ, ಸಕ್ಕರೆ ಕಾರ್ಖಾನೆಗಳ ನಡುವೆ ರಫ್ತು ಕೋಟಾವನ್ನು ನಿಗದಿಪಡಿಸಿದಾಗ ಅದನ್ನು ಅನುಪಾತದ ಆಧಾರದ ಮೇಲೆ ಸಕ್ಕರೆ ಕಾರ್ಖಾನೆಗಳಿಗೆ ಹಂಚಲಾಯಿತು; ಆದ್ದರಿಂದ, ಈ ಬಾರಿಯೂ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು 3ನೇ ಜೂನ್ 2022 ರವರೆಗೆ ಅರ್ಜಿ ಸಲ್ಲಿಸಿದ ಎಲ್ಲಾ ರಫ್ತುದಾರರು/ಸಕ್ಕರೆ ಕಾರ್ಖಾನೆಗಳಿಗೆ ಅವಕಾಶ ನೀಡಲು, ಅನುಪಾತದ ಆಧಾರದ ಮೇಲೆ ರಫ್ತು ಬಿಡುಗಡೆ ಆದೇಶಗಳನ್ನು ನೀಡಲಾಗಿದೆ.

 

ಕಳೆದ ಕೆಲವು ವರ್ಷಗಳಲ್ಲಿ, ದೇಶದಲ್ಲಿ ಸಕ್ಕರೆ ಉತ್ಪಾದನೆಯು ದೇಶೀಯ ಬಳಕೆಗಿಂತ ಸತತವಾಗಿ ಅಧಿಕವಾಗಿದ್ದು, ಹೆಚ್ಚುವರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ದೇಶದಲ್ಲಿನ ಹೆಚ್ಚುವರಿ ಸಕ್ಕರೆಯ ಸಮಸ್ಯೆಯನ್ನು ಪರಿಹರಿಸುವ ದೃಷ್ಟಿಯಿಂದ, ಕೇಂದ್ರ ಸರ್ಕಾರವು ಕಳೆದ ಕೆಲವು ಸಕ್ಕರೆ ಋತುಗಳಲ್ಲಿ ಹೆಚ್ಚುವರಿ ಸಕ್ಕರೆಯನ್ನು ಎಥೆನಾಲ್‌ಗೆ ಪರಿವರ್ತಿಸಲು ಸಕ್ಕರೆ ಕಾರ್ಖಾನೆಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಹೆಚ್ಚುವರಿ ಸಕ್ಕರೆಯನ್ನು ರಫ್ತು ಮಾಡಲು ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಮತ್ತು ಇದರಿಂದಾಗಿ ಸಕ್ಕರೆ ಕಾರ್ಖಾನೆಗಳ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಇದರಿಂದಾಗಿ ರೈತರ ಕಬ್ಬಿನ ಬೆಲೆ ಬಾಕಿಯನ್ನು ಪಾವತಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಕ್ಕರೆಯ ರಫ್ತು ಮತ್ತು ಸಕ್ಕರೆಯನ್ನು ಎಥೆನಾಲ್‌ಗೆ ಪರಿವರ್ತಿಸುವುದು  ಬೇಡಿಕೆ-ಪೂರೈಕೆ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ದೇಶೀಯ ಸಕ್ಕರೆ ಬೆಲೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡಿದೆ. ಸಕ್ಕರೆ ಋತು 2018-19 ರಿಂದ (ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ರಫ್ತು ಮತ್ತು ಸಕ್ಕರೆಯನ್ನು ಎಥೆನಾಲ್‌ಗೆ ಪರಿವರ್ತಿಸುವ  ವಿವರಗಳು ಕೆಳಕಂಡಂತಿವೆ:

 

(ಲಕ್ಷ ಮೆಟ್ರಿಕ್ ಟನ್ (ಎಲ್‌ಎಮ್‌ಟಿ) ನಲ್ಲಿ)

 

ಸಕ್ಕರೆ ಋತು

2018-19

2019-20

2020-21

2021-22

Diversion of sugar to Ethanol

 3 

22 

35 

Exports

38

59

70

100 (estimated)

 

 ಭಾರತವು ಈಗ ವಿಶ್ವದಲ್ಲಿ ಸಕ್ಕರೆಯ ಅತಿ ದೊಡ್ಡ ಉತ್ಪಾದಕ ದೇಶವಾಗಿದ್ದು ಮತ್ತು ಎರಡನೇ ಅತಿ ದೊಡ್ಡ ರಫ್ತು ಮಾಡುವ ದೇಶವಾಗಿ ಮಾರ್ಪಟ್ಟಿದೆ.  ಇದಲ್ಲದೆ, ಭಾರತವು ವಿಶ್ವದಲ್ಲಿ ಸಕ್ಕರೆಯ ಅಗ್ರ ಗ್ರಾಹಕವಾಗಿದೆ. ಭಾರತದಲ್ಲಿ ಸಕ್ಕರೆಯ ಬಳಕೆಯು ವರ್ಷಕ್ಕೆ 2-4% ಬೆಳವಣಿಗೆಯಲ್ಲಿ ಸತತವಾಗಿ ಹೆಚ್ಚುತ್ತಿದೆ.

 

 ಸರ್ಕಾರವು ತೆಗೆದುಕೊಂಡ ಸಮಯೋಚಿತ ಮತ್ತು ಪೂರ್ವಭಾವಿ ನೀತಿ ನಿರ್ಧಾರಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಸಕ್ಕರೆಯ ರಫ್ತು ಗಣನೀಯವಾಗಿ ಹೆಚ್ಚಾಗಿದೆ. ಸಕ್ಕರೆ ರಫ್ತು ಮಾಡಲು ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೆ ನೆರವು ನೀಡುತ್ತಿದೆ. ಆದಾಗ್ಯೂ, ಪ್ರಸ್ತುತ ಸಕ್ಕರೆ ಋತು 2021-22ರಲ್ಲಿ ಸಕ್ಕರೆಯ ಅಂತಾರಾಷ್ಟ್ರೀಯ ಬೆಲೆಗಳು ಹಿಂದಿನ ಸಕ್ಕರೆ ಋತುವಿಗೆ ಹೋಲಿಸಿದರೆ ಹೆಚ್ಚಿನ ಮಟ್ಟದಲ್ಲಿವೆ ಎಂಬ ಅಂಶವನ್ನು ಪರಿಗಣಿಸಿ; ಸರ್ಕಾರವು ತನ್ನಿಂದ ಯಾವುದೇ ರೀತಿಯ ಹಣಕಾಸಿನ ನೆರವನ್ನು ಅವಲಂಬಿಸದೆ ಸಕ್ಕರೆ ರಫ್ತು ಮಾಡಲು ಸಕ್ಕರೆ ಕಾರ್ಖಾನೆಗಳನ್ನು ಪ್ರೋತ್ಸಾಹಿಸಿತು. ಇದರ ಪರಿಣಾಮವಾಗಿ, ಸಕ್ಕರೆ ಕಾರ್ಖಾನೆಗಳಿಗೆ ಯಾವುದೇ ಸಹಾಯವನ್ನು ನೀಡದೆ, ರಫ್ತುಗಳು ಪ್ರಸ್ತುತ ಸಕ್ಕರೆ ಋತು 2021-22 ರಲ್ಲಿ 100 ಎಲ್‌ಎಮ್‌ಟಿ ಯನ್ನು ಮುಟ್ಟುವ ಸಾಧ್ಯತೆಯಿದೆ, ಇದು ಸಾರ್ವಕಾಲಿಕ ಗರಿಷ್ಠ ಪ್ರಮಾಣವಾಗಿದೆ. ಅದೇ ಸಮಯದಲ್ಲಿ, ಸಕ್ಕರೆಯ ಯಾವುದೇ ಅನಿಯಂತ್ರಿತ ರಫ್ತು ತಡೆಯಲು ಸರ್ಕಾರವು ರಫ್ತಿನ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ, ಇದರಿಂದಾಗಿ ಸಕ್ಕರೆಯು ದೇಶೀಯ ಗ್ರಾಹಕರಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಿದೆ  ಎನ್ನುವುದನ್ನು ಖಚಿತಪಡಿಸುತ್ತದೆ.

 

 ಮೇ, 2022 ರ ಮಧ್ಯದಲ್ಲಿ, ಮೇ 2022 ರ ಅಂತ್ಯದ ವೇಳೆಗೆ ಸುಮಾರು 90 ಎಲ್‌ಎಮ್‌ಟಿ ಸಕ್ಕರೆಯನ್ನು ರಫ್ತು ಮಾಡುವ ಸಾಧ್ಯತೆಯಿದೆ ಎಂದು ಸರ್ಕಾರವು ಕಂಡುಕೊಂಡಿದೆ; ಮತ್ತು ಸಕ್ಕರೆಯನ್ನು ಸ್ವೀಕಾರಾರ್ಹ ಮಿತಿಗೆ ರಫ್ತು ಮಾಡುವ ನಿರ್ಬಂಧಗಳನ್ನು ಸಮಯಕ್ಕೆ ವಿಧಿಸದಿದ್ದರೆ, ಸಕ್ಕರೆಯ ಹೆಚ್ಚುವರಿ ರಫ್ತು ಆಗಬಹುದು ಇದು ದೇಶದಲ್ಲಿ ಸಕ್ಕರೆಯ ಕೊರತೆಗೆ ಕಾರಣವಾಗುತ್ತದೆ ಮತ್ತು ಸೆಪ್ಟೆಂಬರ್-ನವೆಂಬರ್, 2022ರ ತಿಂಗಳುಗಳಲ್ಲಿ ಸಕ್ಕರೆ ಬೆಲೆಗಳಲ್ಲಿ ಅನಿಯಂತ್ರಿತ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಸರ್ಕಾರವು ನಿರ್ಧರಿಸಿದೆ..

 

ದೇಶದ ಮಾರುಕಟ್ಟೆಯಲ್ಲಿ ಸಕ್ಕರೆಯ ಸ್ಥಿರ ಬೆಲೆಯನ್ನು ಕಾಯ್ದುಕೊಳ್ಳಲು ಭಾರತ ಸರ್ಕಾರವು ಬದ್ಧವಾಗಿದೆ ಮತ್ತು ಕಳೆದ 12 ತಿಂಗಳುಗಳಲ್ಲಿ, ಸಕ್ಕರೆಯ ಬೆಲೆಗಳು ನಿಯಂತ್ರಣದಲ್ಲಿದೆ. ಭಾರತದಲ್ಲಿ ಸಕ್ಕರೆಯ ಎಕ್ಸ್-ಮಿಲ್ ಬೆಲೆಗಳು ಪ್ರತಿ ಕ್ವಿಂಟಲ್‌ಗೆ ₹ 3150 ರಿಂದ ₹ 3500 ರ ನಡುವೆ ಮಿತಿಯಲ್ಲಿದ್ದರೆ, ಚಿಲ್ಲರೆ ಬೆಲೆಗಳು ದೇಶದ ವಿವಿಧ ಭಾಗಗಳಲ್ಲಿ ₹ 36-44 ರ ವ್ಯಾಪ್ತಿಯಲ್ಲಿ ನಿಯಂತ್ರಣದಲ್ಲಿವೆ.

*****

 



(Release ID: 1832341) Visitor Counter : 173


Read this release in: English , Urdu , Hindi