ಪ್ರಧಾನ ಮಂತ್ರಿಯವರ ಕಛೇರಿ

ಕೇಂದ್ರ ಸಚಿವ ಶ್ರೀ ಅನಂತ್ ಕುಮಾರ್ ಅವರ ನಿಧನಕ್ಕೆ ಪ್ರಧಾನಮಂತ್ರಿ  ಸಂತಾಪ

Posted On: 12 NOV 2018 9:31AM by PIB Bengaluru

ಕೇಂದ್ರ ಸಚಿವ ಶ್ರೀ ಅನಂತ್ ಕುಮಾರ್ ಅವರ ನಿಧನಕ್ಕೆ ಪ್ರಧಾನಮಂತ್ರಿ  ಸಂತಾಪ

 

ಕೇಂದ್ರ ಸಚಿವ ಶ್ರೀ ಅನಂತ್ ಕುಮಾರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

 

“ನನ್ನ ಸಹೋದ್ಯೋಗಿ ಮತ್ತು ಗೆಳೆಯ ಶ್ರೀ ಅನಂತ್ ಕುಮಾರ್ ಜೀ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರೊಬ್ಬ ಅಸಾಮಾನ್ಯ ನಾಯಕರಾಗಿದ್ದರು.  ಕಿರಿಯ ವಯಸ್ಸಿನಲ್ಲೇ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡ ಅವರು, ಜೀವನದುದ್ದಕ್ಕೂ ಅತ್ಯಂತ  ಶ್ರದ್ಧೆ ಮತ್ತು ಸಹಾನುಭೂತಿಗಳಿಂದ ಸಮಾಜ ಸೇವೆ ಮಾಡುತ್ತಿದ್ದರು. ಉತ್ತಮ ಕಾರ್ಯಗಳಿಗಾಗಿ ಅವರು ಸದಾ ಸ್ಮರಣೀಯರಾಗಿರುತ್ತಾರೆ”  ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

 

“ಅವರ ಪತ್ನಿ ಡಾ. ತೇಜಸ್ವಿನಿ ಜೀ ಅವರೊಂದಿಗೆ ನಾನು ಮಾತನಾಡಿದ್ದೇನೆ ಹಾಗೂ ಶ್ರೀ ಅನಂತ್ ಕುಮಾರ್ ಜೀ ಅವರ ನಿಧನಕ್ಕೆ ಸಂತಾಪಗಳನ್ನು ಸೂಚಿಸಿದ್ದೇನೆ. ಈ ದುಃಖದ ಹಾಗೂ ಶೋಕದ ಸಮಯದಲ್ಲಿ ಶ್ರೀ ಅನಂತ್ ಕುಮಾರ್ ಅವರ ಸಂಪೂರ್ಣ ಕುಟುಂಬ, ಸ್ನೇಹಿತರು ಮತ್ತು ಬೆಂಬಲಿಗರೊಂದಿಗೆ ನನ್ನ ಸಂತಾಪಗಳಿವೆ.  ಓಂ ಶಾಂತಿ” ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. 

 

****



(Release ID: 1552424) Visitor Counter : 85