ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ

Posted On: 27 NOV 2017 9:48AM by PIB Bengaluru

ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

 “ನಾನು ವಿಶ್ವಾದ್ಯಂತ ಇರುವ ಲಕ್ಷಾಂತರ ಭಕ್ತರೊಂದಿಗೆ ಸೇರಿ ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಜಯಂತಿಯಂದು ಅವರಿಗೆ ನಮನ ಸಲ್ಲಿಸುತ್ತೇನೆ. ಅವರದು ಅಸಾಮಾನ್ಯವಾದ ಆತ್ಮವಾಗಿದ್ದು ಅವರ ಅನುಕರಣೀಯ ಸೇವೆ ಮತ್ತು ಮಾನವೀಯ ಪ್ರಯತ್ನಗಳು ಅಸಂಖ್ಯಾತರ ಜೀವನದ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರಿವೆ.

ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಶ್ರೀಮಂತ ಚಿಂತನೆಗಳು ಎಲ್ಲ ಅಡೆತಡೆಗಳನ್ನು ಮೀರಿ ಜನರಿಗೆ ಮಾರ್ಗದರ್ಶನ ಮಾಡುತ್ತವೆ. ನೊಂದವರಿಗೆಬಡವರಿಗೆ ಮತ್ತು ದುರ್ಬಲರ ಜೀವನವನ್ನು ಪರಿವರ್ತಿಸುವ ವಿಚಾರದಲ್ಲಿ ನಾವು ಅವರ ದೃಷ್ಟಿಕೋನದಿಂದ ಸದಾ ಪ್ರಭಾವಿತರಾಗಿದ್ದೇವೆ.

ಶ್ರೀ ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್ ಹಾಗೂ ನನ್ನ ಬಾಂಧವ್ಯ ವಿಶೇಷವಾದ್ದದ್ದು. ನಾನು ಅವರೊಂದಿಗೆ ಕಳೆದ ಸಮಯ ಅವಿಸ್ಮರಣೀಯವಾದ್ದು. ನಾನು ಅವರಿಂದ ಹರಸಲ್ಪಟ್ಟ ಅದೃಷ್ಟಶಾಲಿ. ನಾನು ಅವರ ಬಗ್ಗೆ ಸಾರಂಗಪುರದಲ್ಲಿ ಕಳೆದ ವರ್ಷ ಆಡಿದ ಮಾತುಗಳು ಇಲ್ಲಿವೆ. https://www.youtube.com/watch?v=azaYIrMsx5g “, ಎಂದು ಪ್ರಧಾನಿ ಹೇಳಿದ್ದಾರೆ.

 



(Release ID: 1511002) Visitor Counter : 56


Read this release in: English , Gujarati , Tamil