ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯೋಗಕ್ಷೇಮ, ಬುದ್ಧಿವಂತಿಕೆ ಮತ್ತು ಸಮೃದ್ಧಿಗಾಗಿ ಆಶೀರ್ವಾದ ಕೋರಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 10 SEP 2026 10:02AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರ ಯೋಗಕ್ಷೇಮ, ಶುಭತೆ, ರಕ್ಷಣೆ, ಶಾಂತಿ, ಬುದ್ಧಿವಂತಿಕೆ ಮತ್ತು ಸಮೃದ್ಧಿಗಾಗಿ ಆಶೀರ್ವಾದ ಕೋರುವ ಸಂಸ್ಕೃತ ಸುಭಾಷಿತಂವನ್ನು ಹಂಚಿಕೊಂಡಿದ್ದಾರೆ. ಸುಭಾಷಿತಂ ಇಂದ್ರ, ಸೂರ್ಯ, ಗರುಡ ಮತ್ತು ಬೃಹಸ್ಪತಿಯ ಆಶೀರ್ವಾದವನ್ನು ಬಯಸುತ್ತದೆ.

ಪ್ರಧಾನಮಂತ್ರಿಯವರು ಸಂಸ್ಕೃತ ಸುಭಾಷಿತಂವನ್ನು ಹಂಚಿಕೊಂಡಿದ್ದಾರೆ- 

“स्वस्ति न इन्द्रो वृद्धश्रवाः।

स्वस्ति नः पूषा विश्ववेदाः।

स्वस्ति नस्तार्क्ष्यो अरिष्टनेमिः।

स्वस्ति नो बृहस्पतिर्दधातु॥”

ಮಹಿಮಾನ್ವಿತ ಭಗವಾನ್ ಇಂದ್ರನು ನಮಗೆ ಯೋಗಕ್ಷೇಮವನ್ನು ನೀಡಲಿ ಎಂದು ಸುಭಾಷಿತಂ ತಿಳಿಸುತ್ತದೆ. ಇಡೀ ಬ್ರಹ್ಮಾಂಡವನ್ನು ಅರಿತವನು ಮತ್ತು ಎಲ್ಲರ ಪೋಷಕನಾದ ಭಗವಾನ್ ಸೂರ್ಯ ನಮಗೆ ಶುಭವನ್ನು ತರಲಿ. ಅಡೆತಡೆಗಳನ್ನು ನಾಶಪಡಿಸುವ ಭಗವಾನ್ ಗರುಡನು ನಮ್ಮೆಲ್ಲರನ್ನು ರಕ್ಷಿಸಲಿ. ಜ್ಞಾನದ ಅಧಿಪತಿಯಾದ ಭಗವಾನ್ ಬೃಹಸ್ಪತಿ ನಮಗೆ ಶಾಂತಿ, ಬುದ್ಧಿವಂತಿಕೆ ಮತ್ತು ಸಮೃದ್ಧಿಯನ್ನು ಆಶೀರ್ವದಿಸಲಿ.

ಪ್ರಧಾನಮಂತ್ರಿ  ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ;

“स्वस्ति न इन्द्रो वृद्धश्रवाः।

स्वस्ति नः पूषा विश्ववेदाः।

स्वस्ति नस्तार्क्ष्यो अरिष्टनेमिः।

स्वस्ति नो बृहस्पतिर्दधातु॥”

 

 

*****


(ಪ್ರಕಟಣೆ ಐ.ಡಿ.: 2308645) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Manipuri , Bengali , Gujarati , Tamil , Malayalam