ಉಕ್ಕು ಸಚಿವಾಲಯ
ಭಾರತದ ಉಕ್ಕಿನ ಕ್ಷೇತ್ರಕ್ಕೆ ಮಾರ್ಗಸೂಚಿ ರೂಪಿಸಲು ಭುವನೇಶ್ವರದಲ್ಲಿ ಚಿಂತನಾ ಶಿಬಿರ ಉದ್ಘಾಟಿಸಿದ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ
ಉಕ್ಕಿನ ವಲಯಕ್ಕೆ ಕಾರ್ಯತಂತ್ರದ ಮಾರ್ಗಸೂಚಿ ರೂಪಿಸಲು ಸರ್ಕಾರ, ಸಿ.ಪಿ.ಎಸ್.ಇ ಗಳು ಮತ್ತು ಕೈಗಾರಿಕಾ ನಾಯಕರನ್ನು ಒಟ್ಟುಗೂಡಿಸಲಿದೆ ಚಿಂತನ ಶಿವಿರ
Posted On:
20 NOV 2025 3:32PM by PIB Bengaluru
ಭುವನೇಶ್ವರದ ಮೇಫೇರ್ ಸಮಾವೇಶದಲ್ಲಿ ಎರಡು ದಿನಗಳ ಚಿಂತನ ಶಿವಿರವನ್ನು ಇಂದು ಉದ್ಘಾಟಿಸಲಾಯಿತು, ಇದು ಭಾರತದ ಉಕ್ಕಿನ ಉದ್ಯಮದ ಭವಿಷ್ಯದ ಕುರಿತು ತೀವ್ರವಾದ ಸಂವಾದ ಆರಂಭಿಸುವುದನ್ನು ಸೂಚಿಸುತ್ತದೆ. ಈ ಕಾರ್ಯಕ್ರಮವನ್ನು ಕೇಂದ್ರ ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು, ಉಕ್ಕು ಖಾತೆ ರಾಜ್ಯ ಸಚಿವರಾದ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ, ಒಡಿಶಾದ ಕೈಗಾರಿಕೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ಶ್ರೀ ಹೇಮಂತ್ ಶರ್ಮಾ ಮತ್ತು ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್ ಹಾಜರಿದ್ದರು. ಸಚಿವಾಲಯದ ಹಿರಿಯ ಅಧಿಕಾರಿಗಳು, ಎಸ್.ಎ.ಐ.ಎಲ್, ಎನ್ಎಂಡಿಸಿ, ಎಂ.ಒ.ಐ.ಎಲ್, ಎಂ.ಇ.ಸಿ.ಒ.ಎನ್, ಎಂ.ಎಸ್.ಟಿ.ಸಿ.ಯ ಸಿ.ಪಿ.ಎಸ್.ಇ ಗಳ ಮುಖ್ಯಸ್ಥರು, ಐಎನ್ಎಸ್ಡಿಎಜಿ, ಐಎಸ್ಸಿಎ, ಬಿ ಐ ಎಸ್ ಎ ಜಿಯ ಡೊಮೇನ್ ತಜ್ಞರು, ಟಾಟಾ ಸ್ಟೀಲ್, ಜೆಎಸ್ಡಬ್ಲ್ಯೂ ನಂತಹ ಖಾಸಗಿ ಕೈಗಾರಿಕೆಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿದರು.

ತಮ್ಮ ಭಾಷಣದಲ್ಲಿ, ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಾರ್ಯತಂತ್ರದ ನಾಯಕತ್ವಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು, ಇದು ದೇಶೀಯ ಉಕ್ಕಿನ ಉದ್ಯಮದ ಸ್ಥಿತಿಸ್ಥಾಪಕತ್ವ ಮತ್ತು ಬೆಳವಣಿಗೆಯ ಹಾದಿಯಲ್ಲಿ ಮಾರ್ಗದರ್ಶನ ನೀಡಿದೆ. ರಾಷ್ಟ್ರ ನಿರ್ಮಾಣದಲ್ಲಿ ಉಕ್ಕಿನ ಕ್ಷೇತ್ರದ ಪ್ರಮುಖ ಪಾತ್ರವಿದೆ ಎಂದು ತಿಳಿಸಿದರು. ಸಾಮರ್ಥ್ಯವನ್ನು ಬಲಪಡಿಸುವುದು, ನಾವೀನ್ಯತೆಯನ್ನು ಬೆಳೆಸುವುದು ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಸ್ಪರ್ಧಾತ್ಮಕತೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಡಿಜಿಟಲೀಕರಣದಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಅವರು ವಿವರಿಸಿದರು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಿರಂತರ ಹೂಡಿಕೆಯ ಅಗತ್ಯವನ್ನು ಸಚಿವರು ಹೇಳಿದರು ಮತ್ತು ಎಲ್ಲಾ ಪಾಲುದಾರರ ಸಾಮೂಹಿಕ ಪ್ರಯತ್ನಗಳು ಭಾರತದ ಉಕ್ಕು ಉದ್ಯಮದ ಒಟ್ಟಾರೆ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಯನ್ನು ಖಚಿತಪಡಿಸುತ್ತದೆ ಮತ್ತು ರಾಷ್ಟ್ರದ ಪ್ರಗತಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು.

ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ ಅವರು ಮಾತನಾಡಿ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಉಕ್ಕಿನ ಪ್ರಮುಖ ಪಾತ್ರವನ್ನು ವಿವರಿಸಿದರು. ಮತ್ತು ಚಿಂತನ ಶಿಬಿರದ ಎಲ್ಲಾ ವಿಷಯಗಳು ಉದ್ಯಮವನ್ನು ಹೆಚ್ಚಿಸುವ ಮತ್ತು ರಾಷ್ಟ್ರೀಯ ಬೆಳವಣಿಗೆಗೆ ಅದರ ಕೊಡುಗೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದರು.
ಒಡಿಶಾ ಖನಿಜ ಸಮೃದ್ಧ ಮತ್ತು ಕರಾವಳಿ ರಾಜ್ಯವಾಗಿರುವುದರಿಂದ ಉಕ್ಕು ಸೇರಿದಂತೆ ವಿವಿಧ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಇದು ಸೂಕ್ತವಾಗಿರುವುದರಿಂದ ಒಡಿಶಾ ವಿಶಿಷ್ಟ ಪ್ರಯೋಜನವನ್ನು ಹೊಂದಿದೆ ಎಂದು ACS ನ ಶ್ರೀ ಹೇಮಂತ್ ಶರ್ಮಾ ಹೇಳಿದರು.
ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್ ಮಾತನಾಡಿ, ಗೌರವಾನ್ವಿತ ಪ್ರಧಾನಮಂತ್ರಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಅಭಿವೃದ್ಧಿ, ಸವಾಲುಗಳು ಮತ್ತು ಕ್ಷೇತ್ರದ ಭವಿಷ್ಯದ ಕುರಿತು ಚರ್ಚಿಸಲು ಇಂಥ ವೇದಿಕೆಗಳ ಮಹತ್ವವನ್ನು ಒತ್ತಿ ಹೇಳುವ ಮೂಲಕ ಶಿಬಿರದ ಗುರಿಯನ್ನು ವಿವರಿಸಿದರು. CPSE ಗಳ ಜೊತೆಗೆ ಖಾಸಗಿ ವಲಯದ ಭಾಗವಹಿಸುವಿಕೆಯು ಸಹಾಯ ಮಾಡುತ್ತದೆ. ಮೂಲಸೌಕರ್ಯ ವೆಚ್ಚದಿಂದಾಗುವ ಉಕ್ಕಿನ ಬಳಕೆಯಲ್ಲಿ ಭಾರತದ ವಿಶಿಷ್ಟ ಬೆಳವಣಿಗೆಯನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು. CPSE ಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಮತ್ತು ಆಂತರಿಕ ಪ್ರತಿಭೆಗಳಿಂದ ಪ್ರಯತ್ನಗಳನ್ನು ಮುನ್ನಡೆಸಬೇಕು ಎಂದು ಪ್ರೋತ್ಸಾಹಿಸಿದರು. ಯುವ ಕಾರ್ಯನಿರ್ವಾಹಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿದರು. ಈ ಉದ್ದೇಶಕ್ಕಾಗಿ, ಆಂತರಿಕ ಸ್ಪರ್ಧೆಯನ್ನು ಸಹ ನಡೆಸಲಾಯಿತು ಮತ್ತು ಅತ್ಯುತ್ತಮರಿಗೆ ತಮ್ಮ ನಾವೀನ್ಯ ವಿಚಾರಗಳನ್ನು ಪ್ರಸ್ತುತಪಡಿಸಲು ಅವಕಾಶ ನೀಡಲಾಯಿತು.

ಶಿಬಿರದ ಮೊದಲ ದಿನವು ತಂತ್ರಜ್ಞಾನ-ಚಾಲಿತ ನಾವೀನ್ಯತೆ, ಕಾರ್ಯಾಚರಣೆಯ ಶ್ರೇಷ್ಠತೆ, ಸ್ಥಳೀಯ ತಂತ್ರಜ್ಞಾನಗಳು ಮತ್ತು ಆಧುನಿಕ ಗಣಿಗಾರಿಕೆ ವಿಧಾನಗಳ ಕುರಿತು ವಿಶೇಷ ಅಧಿವೇಶನಗಳನ್ನು ಒಳಗೊಂಡಿತ್ತು, ಮೂಲಸೌಕರ್ಯವನ್ನು ನವೀಕರಿಸುವುದು, ಸಾಮರ್ಥ್ಯವನ್ನು ವಿಸ್ತರಿಸುವುದು ಮತ್ತು ವಲಯದಾದ್ಯಂತ ದಕ್ಷತೆಯನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಚರ್ಚೆಗಳು ಕೇಂದ್ರೀಕರಿಸಿದವು. ಉದ್ಯಮಕ್ಕೆ ಕಾರ್ಯತಂತ್ರದ ಮಾರ್ಗಸೂಚಿಯನ್ನು ರೂಪಿಸುವ ಗುರಿಯನ್ನು ಹೊಂದಿರುವ ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ತಾಂತ್ರಿಕ ತಜ್ಞರ ದೃಷ್ಟಿಕೋನಗಳ ಚರ್ಚೆ ನಡೆಯಿತು. ಭಾರತದ ಆರ್ಥಿಕ ಬೆಳವಣಿಗೆ ಮತ್ತು ಕೈಗಾರಿಕಾ ಪ್ರಗತಿಯನ್ನು ಚಾಲನೆ ಮಾಡುವಲ್ಲಿ ಉಕ್ಕಿನ ವಲಯದ ಪಾತ್ರವನ್ನು ಬಲಪಡಿಸಲು ದೀರ್ಘಾವಧಿಯ ತಂತ್ರಗಳು, ಪಾಲುದಾರರ ಸಹಯೋಗ ಮತ್ತು ಕಾರ್ಯಸಾಧ್ಯ ಫಲಿತಾಂಶಗಳ ಕುರಿತು ಅಧಿವೇಶನಗಳೊಂದಿಗೆ ಚಿಂತನ ಶಿಬಿರವು ನಾಳೆಯೂ ಮುಂದುವರಿಯುತ್ತದೆ.
*****
(Release ID: 2192338)
Visitor Counter : 4