ಪರಿಸರ ಮತ್ತು ಅರಣ್ಯ ಸಚಿವಾಲಯ

ಕೇಂದ್ರ ಪರಿಸರ ಸಚಿವರಾದ ಭೂಪೇಂದರ್ ಯಾದವ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು 2024 ರ ಸ್ವಚ್ಛ ವಾಯು ಸರ್ವೇಕ್ಷಣ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು


ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದಡಿ (NCAP) ಒಂಬತ್ತು ಅತ್ಯುತ್ತಮ ಪ್ರದರ್ಶನ ನೀಡುವ ನಗರಗಳಿಗೆ ಶುಭ್ರ ಆಕಾಶಕ್ಕಾಗಿ ಶುದ್ಧ ಗಾಳಿಯ ಅಂತಾರಾಷ್ಟ್ರೀಯ ದಿನದ ಸಂದರ್ಭದಲ್ಲಿ ಪ್ರಶಸ್ತಿ ನೀಡಲಾಯಿತು, ಇದನ್ನು ಸ್ವಚ್ಛ ವಾಯು ದಿವಸ್ ಎಂದು ಸಹ ಆಚರಿಸಲಾಗುತ್ತದೆ

ಪ್ರಧಾನಿಯವರ ನೇತೃತ್ವದಲ್ಲಿ ಶುದ್ಧ ಗಾಳಿ ಮತ್ತು ನೀಲಿ ಆಕಾಶಕ್ಕಾಗಿ ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ: ಕೇಂದ್ರ ಪರಿಸರ ಸಚಿವ

ನೀಲಿ ಆಕಾಶಕ್ಕೆ ಹಸಿರು ಭೂಮಿ ಅತ್ಯಗತ್ಯ ಮತ್ತು ಮೋದಿ ಸರ್ಕಾರವು ವಾಹನ ಸ್ಕ್ರ್ಯಾಪ್ ನೀತಿ, ವೇಸ್ಟ್ ಟು ವೆಲ್ತ್, ಏಕ್ ಪೇಡ್‌ ಮಾ ಕೆ ನಾಮ್: ಭೂಪೇಂದರ್ ಯಾದವ್

ರಾಜಸ್ಥಾನದಲ್ಲಿ 7 ಕೋಟಿ ಸಸಿ ನೆಡಲಾಗಿದೆ ಎಂದ ಮುಖ್ಯಮಂತ್ರಿ  ಭಜನ್ ಲಾಲ್ ಶರ್ಮಾ; ಮತ್ತು ಸಾಧನೆಗಾಗಿ ಉತ್ಸಾಹದಿಂದ ಕೆಲಸ ಮಾಡಿದ ಎಲ್ಲಾ ಇಲಾಖೆಗಳನ್ನು ಶ್ಲಾಘಿಸಿದರು

Posted On: 08 SEP 2024 9:16AM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಅವರ ಉಪಸ್ಥಿತಿಯಲ್ಲಿ ಜೈಪುರದಲ್ಲಿ 07.09.24 ರಂದು ಅಂತಾರಾಷ್ಟ್ರೀಯ ನೀಲಿ ಆಕಾಶಕ್ಕಾಗಿ ಶುದ್ಧ ಗಾಳಿಯ ದಿನವನ್ನು (ಸ್ವಚ್ಛ ವಾಯು ದಿವಸ್) ಆಚರಿಸಲಾಯಿತು. ಈ ಸಮಾರಂಭದಲ್ಲಿ ರಾಜಸ್ಥಾನ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವರಾದ ಶ್ರೀ ಸಂಜಯ್ ಶರ್ಮಾ ಮತ್ತು ರಾಜಸ್ಥಾನ ಸರ್ಕಾರದ ರಾಜ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಜಬರ್ ಸಿಂಗ್ ಖರ್ರಾ ಅವರು ಉಪಸ್ಥಿತರಿದ್ದರು. ರಾಜಸ್ಥಾನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಅಭಿಯಾನ ಹಾಗೂ ಸಮಾರಂಭವನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ, NCAP ಕಾರ್ಯಕ್ರಮದ ಅನುಸಾರ, ಒಳಗೊಂಡಿರುವ ಏಜೆನ್ಸಿಗಳ ಕೊಡುಗೆಗಳು ಮತ್ತು 131 NCAP ನಗರಗಳಲ್ಲಿ ಗಾಳಿಯ ಗುಣಮಟ್ಟದಲ್ಲಿನ ಸುಧಾರಣೆಗಳನ್ನು ಮಾಡುವ ಆಕರ್ಷಕ ವೀಡಿಯೊವನ್ನು ಪ್ರದರ್ಶಿಸಲಾಯಿತು. ಕೇಂದ್ರೀಕೃತ ಕ್ರಮಗಳು, ಸಂಪನ್ಮೂಲಗಳ ಒಮ್ಮುಖ ಮತ್ತು ಪರಿಣಾಮಕಾರಿ ಮೇಲ್ವಿಚಾರಣೆಯು 95 ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವ ಪ್ರವೃತ್ತಿಯೊಂದಿಗೆ ಧನಾತ್ಮಕ ಫಲಿತಾಂಶಗಳನ್ನು ತೋರಿಸಿದೆ ಎಂದು ತಿಳಿಸಲಾಗಿದೆ. 2017-18ರ ಮೂಲ ವರ್ಷಕ್ಕೆ ಸಂಬಂಧಿಸಿದಂತೆ 51 ನಗರಗಳು PM10 ಮಟ್ಟವನ್ನು ಶೇ.20ಕ್ಕಿಂತ ಹೆಚ್ಚಿನಷ್ಟು ಕಡಿಮೆಗೊಳಿಸಿವೆ ಮತ್ತು ಈ ನಗರಗಳಲ್ಲಿ 21%-40% ಕ್ಕಿಂತ ಹೆಚ್ಚು ಕಡಿತವನ್ನು ಸಾಧಿಸಿವೆ.

ಸ್ಥಳೀಯ ಸಂದರ್ಭಗಳು ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ನಗರಗಳು ಕೈಗೊಂಡ ಉಪಕ್ರಮಗಳ ಉದಾಹರಣೆಗಳನ್ನು ಪ್ರದರ್ಶಿಸುವ 'ಕಾರ್ಯಸಾಧ್ಯ ತಂತ್ರಜ್ಞಾನಗಳು ಮತ್ತು ಅಭ್ಯಾಸಗಳ ಕುರಿತು ಸಂಕಲನ: NCAP ನಗರಗಳಿಂದ ಪಾಠಗಳು' ಎಂಬ ಶೀರ್ಷಿಕೆಯ ದಾಖಲೆಯನ್ನು ಬಿಡುಗಡೆ ಮಾಡಲಾಯಿತು. ಇದಲ್ಲದೇ, "ಏಕ್ ಪೇಡ್ ಮಾ ಕೆ ನಾಮ್" ಅಭಿಯಾನದ ಅಡಿಯಲ್ಲಿ 100 ಸಸಿಗಳನ್ನು ಸಹ 'ಮಾತ್ರಿ ವಾನ್', ಜೈಪುರ ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ನೆಡಲಾಯಿತು.

ಸ್ವಚ್ಛ ವಾಯು ಸರ್ವೇಕ್ಷಣ್ ಪ್ರಶಸ್ತಿಗಳನ್ನು ಸೂರತ್, ಜಬಲ್ಪುರ್, ಮತ್ತು ಆಗ್ರಾಕ್ಕೆ ವರ್ಗ-1 (10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ) ಅಡಿಯಲ್ಲಿ ಉತ್ತಮ ಪ್ರದರ್ಶನ ನೀಡಿದ NCAP ನಗರಗಳಿಗೆ ನೀಡಲಾಯಿತು; ವರ್ಗ-2 (3 ಮತ್ತು 10 ಲಕ್ಷಗಳ ನಡುವಿನ ಜನಸಂಖ್ಯೆ) ಫಿರೋಜಾಬಾದ್, ಅಮರಾವತಿ ಮತ್ತು ಝಾನ್ಸಿಗೆ; ಮತ್ತು ವರ್ಗ-3 (3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ) ರಾಯ್‌ ಬರೇಲಿ, ನಲ್ಗೊಂಡ, ಮತ್ತು ನಲಗಢಕ್ಕೆ ನೀಡಲಾಯಿತು. ವಿಜೇತ ನಗರಗಳ ಪುರಸಭೆಯ ಆಯುಕ್ತರಿಗೆ ನಗದು ಬಹುಮಾನ, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು.

ವಿಜೇತ ನಗರಗಳನ್ನು ಅಭಿನಂದಿಸುತ್ತಾ ಮತ್ತು ಇತರ NCAP ನಗರಗಳನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವ ಶ್ರೀ ಭೂಪೇಂದರ್ ಯಾದವ್ ಪ್ರೋತ್ಸಾಹಿಸಿದರು. ಈ ಅಭಿಯಾನಕ್ಕೆ ಪಾಲುದಾರಿಕೆಗಳ ಅಗತ್ಯವನ್ನು ಒತ್ತಿ ಹೇಳಿದರು. ಈಗ ಕ್ಲೀನ್ ಏರ್‌ನಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ವಾಯು ಮಾಲಿನ್ಯವನ್ನು ಎದುರಿಸಲು ನಮ್ಮ ಜವಾಬ್ದಾರಿಯನ್ನು ಸ್ವೀಕರಿಸುವುದು ಅಗತ್ಯ ಎಂದು ನೆನಪಿಸಿದರು ‘ಪ್ರಕೃತಿಯು ನಮಗೆ ಅತ್ಯುತ್ತಮವಾದದ್ದನ್ನು ನೀಡುತ್ತದೆ; ಪ್ರತಿಯಾಗಿ, ನಾವು ಪ್ರಕೃತಿಗೆ ನಮ್ಮ ಅತ್ಯುತ್ತಮ ಕೊಡುಗೆ ನೀಡಬೇಕುʼ ಎಂದು ತಿಳಿಸಿದರು.

 

ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಕೇಂದ್ರೀಯ ಕಮಾಂಡ್ ಮಾನಿಟರಿಂಗ್ ಫೆಸಿಲಿಟಿ, ಜನ್ ಭಾಗಿದರಿ ಉಪಕ್ರಮಗಳು, ತಾಂತ್ರಿಕ ಮಧ್ಯಸ್ಥಿಕೆಗಳು ಇತ್ಯಾದಿಗಳಂತಹ ವಿವಿಧ ಕಾರ್ಯತಂತ್ರದ ಉಪಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಣ್ಣ ನಗರಗಳು ಮತ್ತು ಪಟ್ಟಣಗಳನ್ನು ಒಳಗೊಂಡಂತೆ ಇತರೆ ನಗರಗಳನ್ನು ಶ್ಲಾಘಿಸಿದರು. 2017 ರ ಮೂಲ ವರ್ಷದಿಂದ ಹೆಚ್ಚಿನ NCAP ನಗರಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ ಎಂದು ಸಚಿವರು, ಎಲ್ಲಾ ಏಜೆನ್ಸಿಗಳ ಸಾಮೂಹಿಕ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ವಿಜ್ಞಾನಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು Ideas4LiFE ಅಭಿಯಾನದಲ್ಲಿ ಭಾಗವಹಿಸಲು ಪ್ರೇರೇಪಿಸಿದರು ಮತ್ತು ಏಳು ಮಿಷನ್ ಲೈಫ್ ಥೀಮ್‌ಗಳ ಕುರಿತು ನವೀನ ಆಲೋಚನೆಗಳು / ಪರಿಹಾರಗಳನ್ನು ಸಲ್ಲಿಸಲು ಪ್ರೇರೇಪಿಸಿದರು, ಅವುಗಳೆಂದರೆ, ನೀರನ್ನು ಉಳಿಸಿ, ಶಕ್ತಿಯನ್ನು ಉಳಿಸಿ, ತ್ಯಾಜ್ಯವನ್ನು ಕಡಿಮೆ ಮಾಡಿ, ಇ-ತ್ಯಾಜ್ಯವನ್ನು ಕಡಿಮೆ ಮಾಡಿ, ಏಕ ಬಳಕೆ ಪ್ಲಾಸ್ಟಿಕ್‌ ಬೇಡ ಎಂಬುದನ್ನು, ಅಳವಡಿಸಿಕೊಳ್ಳಿ. ಸುಸ್ಥಿರ ಆಹಾರ ವ್ಯವಸ್ಥೆಗಳು ಮತ್ತು ಆರೋಗ್ಯಕರ ಜೀವನಶೈಲಿಗಳನ್ನು ಅಳವಡಿಸಿಕೊಳ್ಳಿ ಎಂದರು.

 

ಮಿಷನ್ ಲೈಫ್ ಮತ್ತು ದೇಶದಲ್ಲಿ ಪರಿಸರ ಗುಣಮಟ್ಟವನ್ನು ಸುಧಾರಿಸಲು ಪ್ರಧಾನ ಮಂತ್ರಿಯವರ ದೃಷ್ಟಿಯನ್ನು ಸಾಕಾರಗೊಳಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಬೃಹತ್ ಸಸಿ ನೆಡುವ ಅಭಿಯಾನಕ್ಕಾಗಿ ಮತ್ತು ದಿನಾಚರಣೆಯನ್ನು ಆಯೋಜಿಸಿದ್ದಕ್ಕಾಗಿ ರಾಜಸ್ಥಾನ ಸರ್ಕಾರವನ್ನು ಸಚಿವರು ಅಭಿನಂದಿಸಿದರು.

ಜೈಪುರದಲ್ಲಿ ಸ್ವಚ್ಛ ವಾಯು ದಿವಸ್ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ (NCAP) ಅಪೆಕ್ಸ್ ಸಮಿತಿಯ 4 ನೇ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಪರಿಸರ ಸಚಿವರು ವಹಿಸಿದ್ದರು. ಜೈಪುರದಲ್ಲೂ ಸಸಿ ನೆಟ್ಟರು.

 

ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಭಾಷಣ ಮಾಡಿ, ಸ್ವಚ್ಛ ಭಾರತ್ ಮಿಷನ್ ಮತ್ತು 'ಏಕ್ ಪೇಡ್‌ ಮಾ ಕೆ ನಾಮ್' ನಂತಹ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳ ಮೂಲಕ ಸ್ವಚ್ಛ ಮತ್ತು ಹಸಿರು ಪರಿಸರಕ್ಕಾಗಿ ಪ್ರಧಾನಮಂತ್ರಿಯವರ ಕರೆಗೆ ಓಗೊಟ್ಟು ಇದನ್ನು ಆಯೋಜಿಸಲಾಗಿದೆ. ರಾಜ್ಯದಲ್ಲಿ 7 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಎಂದು ಮಾಹಿತಿ ನೀಡಿದರು. ಉತ್ಸಾಹದಿಂದ ಕೆಲಸ ಮಾಡಿದ ಎಲ್ಲಾ ಇಲಾಖೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸಾಂಸ್ಕೃತಿಕವಾಗಿ ನಾವು ಸಮಾಜವನ್ನು ಸಂರಕ್ಷಿಸುತ್ತಿದ್ದೇವೆ, ಪ್ರಕೃತಿಯನ್ನು ಗೌರವಿಸುತ್ತೇವೆ ಮತ್ತು ನಮ್ಮ ನದಿಗಳನ್ನು ಪೂಜಿಸುತ್ತಿದ್ದೇವೆ ಎಂದು ಅವರು ಹೇಳಿದರು. ನಾವು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಹೆಚ್ಚು ಸಮಗ್ರವಾದ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಶ್ರಮಿಸಬೇಕು. ಈ ವರ್ಷದ ಆಚರಣೆಯ ವಿಷಯದ ಮೇಲೆ ಕೇಂದ್ರೀಕರಿಸಿದೆ. 'ಈಗ ಶುದ್ಧ ಗಾಳಿಯಲ್ಲಿ ಹೂಡಿಕೆ ಮಾಡಿ,' ಶುದ್ಧ ಗಾಳಿ ಮತ್ತು ಸುಧಾರಿತ ಜೀವನದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ನಮ್ಮ ಸಮಯ, ಸಂಪನ್ಮೂಲಗಳು ಮತ್ತು ಪ್ರಯತ್ನಗಳನ್ನು ಹೂಡಿಕೆ ಮಾಡುವ ಅಗತ್ಯವಿದೆ. ರಾಜಸ್ಥಾನದಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಕೈಗೊಂಡ ವಿವಿಧ ಕ್ರಮಗಳನ್ನು ತಿಳಿಸಿದರು, ಐದು ನಗರಗಳ ಮೇಲೆ ಹೆಚ್ಚು ಕೇಂದ್ರೀಕರಿಸಲಾಗಿದೆ. ರಾಜ್ಯವು 'ಹಸಿರು ಬೆಳವಣಿಗೆಯ ಬಜೆಟ್' ಅನ್ನು ಸಿದ್ಧಪಡಿಸುತ್ತಿದೆ ಮತ್ತು ಪ್ರಮುಖ ಇಂಟರ್‌ಸಿಟಿ ಮತ್ತು ಇಂಟ್ರಾಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ SPCB/PCC ಗಳ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು, NCAP ನಗರಗಳ ಮುನ್ಸಿಪಲ್ ಕಮಿಷನರ್‌ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಜ್ಞರು, ವಿದ್ಯಾರ್ಥಿಗಳು, ಪ್ರದರ್ಶಕರು ಮತ್ತು ಹಲವಾರು ಮಂದಿ ವರ್ಚುವಲ್ ಮೂಲಕ ಭಾಗವಹಿಸಿದರು.

 

*****



(Release ID: 2053003) Visitor Counter : 14