ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಬೆಂಗಳೂರು ಶೀಘ್ರದಲ್ಲೇ ಭಾರತದ ಕ್ರೀಡಾ ಕೇಂದ್ರ ಎಂದು ಕರೆಯಲ್ಪಡುತ್ತದೆ: ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್


ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರಕ್ಕೆ ಸಚಿವರ ಭೇಟಿ; ಯುವಜನರು ಮತ್ತು ಖ್ಯಾತ ಕ್ರೀಡಾ ವ್ಯಕ್ತಿಗಳೊಂದಿಗೆ ಮೈ ಭಾರತ್ ಸಂವಾದ

Posted On: 23 DEC 2023 5:06PM by PIB Bengaluru

ಸೂಕ್ತ ಹವಾಮಾನ ಪರಿಸ್ಥಿತಿ ಮತ್ತು ಅತ್ಯುತ್ತಮ ಕ್ರೀಡಾ ಮೂಲಸೌಕರ್ಯಗಳಿಂದಾಗಿ ಬೆಂಗಳೂರನ್ನು ಶೀಘ್ರದಲ್ಲೇ ಭಾರತದ ಕ್ರೀಡಾ ಕೇಂದ್ರ ಎಂದು ಕರೆಯಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಬೆಂಗಳೂರಿನಲ್ಲಿರುವ ಕ್ರೀಡೆ ಮತ್ತು ಅಥ್ಲೆಟಿಕ್ಸ್‌ ಬಗೆಗಿನ ಉತ್ಸಾಹವನ್ನು ಸಚಿವರು ಶ್ಲಾಘಿಸಿದರು. ಅನುಭವಿ ಕ್ರೀಡಾಪಟುಗಳು ಸಕ್ರಿಯವಾಗಿ ತಮ್ಮದೇ ಆದ ಅಕಾಡೆಮಿಗಳನ್ನು ಪ್ರಾರಂಭಿಸುತ್ತಿದ್ದಾರೆ, ಜ್ಞಾನವನ್ನು ರವಾನಿಸುತ್ತಿದ್ದಾರೆ, ತರಬೇತಿ ಅಥವಾ ಮೌಲ್ಯಮಾಪನ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದಾರೆ, ಕ್ರೀಡೆಯಲ್ಲಿ ದೇಶದ ಹೊಸ ಪ್ರಾಬಲ್ಯಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಮೈ ಭಾರತ್ ಪೋರ್ಟಲ್‌ನಲ್ಲಿ ನೋಂದಾಯಿಸಲು, ಸ್ವಯಂಸೇವಾ ಚಟುವಟಿಕೆಯನ್ನು ಕೈಗೊಳ್ಳಲು, ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ವೇದಿಕೆಯನ್ನು ಬಳಸಿಕೊಳ್ಳಲು, ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಉಪಕ್ರಮಗಳನ್ನು ಪೋಸ್ಟ್ ಮಾಡಲು ಮತ್ತು ಮೈ ಭಾರತ್ ಉಪಕ್ರಮದ ಲಾಭ ಪಡೆಯಲು ಇತರರನ್ನು ಪ್ರೇರೇಪಿಸಸುವ ಬಗ್ಗೆ ಶ್ರೀ ಠಾಕೂರ್ ಒತ್ತು ನೀಡಿದರು. ದೇಶದಾದ್ಯಂತ ಯುವಜನರ ಮೇಲೆ ಪ್ರಭಾವ ಬೀರಲು ಮೈ ಭಾರತ್‌ ನ ಭಾಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸ್ಪೂರ್ತಿದಾಯಕ ಕಥೆಗಳನ್ನು ಪೋಸ್ಟ್ ಮಾಡುವಂತೆ ಸಚಿವರು ಕ್ರೀಡಾಪಟುಗಳನ್ನು ಒತ್ತಾಯಿಸಿದರು.

ಅವರು ಖೇಲೋ ಇಂಡಿಯಾ ಕಾರ್ಯಕ್ರಮವನ್ನು ವಿಶೇಷವಾಗಿ ಇತ್ತೀಚೆಗೆ ನಡೆದ ಮೊದಲ ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟವನ್ನು ಪ್ರಸ್ತಾಪಿಸಿದರು, ಅಲ್ಲಿ 3000 ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಭಾಗವಹಿಸಿದ್ದರು. ಮುಂಬರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟವು ತಮಿಳುನಾಡಿನಲ್ಲಿ ನಡೆಯಲಿದೆ ಎಂದು ಸಚಿವರು ಹೇಳಿದರು. ಖೇಲೋ ಇಂಡಿಯಾ ಎಂಬುದು ಪ್ರತಿಭೆಗಳನ್ನು ಗುರುತಿಸುವ, ಅವರನ್ನು ಪೋಷಿಸುವ, ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಮ್ ಮೂಲಕ ಅವರು ಉತ್ಕೃಷ್ಟರಾದಾಗ ಬೆಂಬಲ ನೀಡುವ ಯೋಜನೆಯಾಗಿದೆ, ಇವೆಲ್ಲವೂ ಅಭಿವೃದ್ಧಿ ಹೊಂದಿದ ಭಾರತ - ವಿಕಸಿತ ಭಾರತ ಪರಿಕಲ್ಪನೆಗೆ ಕೊಡುಗೆ ನೀಡುತ್ತಿವೆ ಎಂದು ಅವರು ಹೇಳಿದರು.

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ 330 ಹಾಸಿಗೆ ಮತ್ತು 300 ಹಾಸಿಗೆಗಳ ಎರಡು ಹಾಸ್ಟೆಲ್ ಕಟ್ಟಡಗಳು ಮತ್ತು 400 ಮೀಟರ್ ಸಿಂಥೆಟಿಕ್ ಅಥ್ಲೆಟಿಕ್ಸ್ ಟ್ರ್ಯಾಕ್‌ ಅನ್ನು ಇಂದು ಉದ್ಘಾಟಿಸಿ ಸಚಿವರು ಮಾತನಾಡಿದರು.

330 ಹಾಸಿಗೆಗಳ ಹಾಸ್ಟೆಲ್ 28.72 ಕೋಟಿ ರೂ. ಯೋಜನಾ ವೆಚ್ಚದೊಂದಿಗೆ 110 ಕೊಠಡಿಗಳೊಂದಿಗೆ ಹೊಂದಿಕೊಂಡಿರುವ ಶೌಚಾಲಯಗಳಿರುವ ಗ್ರೌಂಡ್+5 ಸೌಲಭ್ಯವಾಗಿದೆ. ಹಾಸ್ಟೆಲ್ ಕೊಠಡಿಗಳನ್ನು ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್, ಕ್ರೀಡೆಗಳು ಮತ್ತು ಮನರಂಜನೆಗಾಗಿ ಸೂಕ್ತವಾದ ವಾತಾವರಣದೊಂದಿಗೆ ಎಲ್ಲಾ ಸೌಕರ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಮಹಿಳಾ ಹಾಸ್ಟೆಲ್‌ ಗೆ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಯಿಂದ ಧನಸಹಾಯ ನೀಡಲಾಗಿದ್ದು, ಕೋಲ್ ಇಂಡಿಯಾ ಲಿಮಿಟೆಡ್ 25 ಕೋಟಿ ರೂ. ದೇಣಿಗೆ ನೀಡಿದೆ. ಅತ್ಯಾಧುನಿಕ ಸೌಲಭ್ಯವು ಮಹಿಳಾ ಕ್ರೀಡಾಪಟುಗಳಿಗೆ ವಸತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಖೇಲೋ ಇಂಡಿಯಾ ಯೋಜನೆಯಡಿ 26.77 ಕೋಟಿ ರೂ. ವೆಚ್ಚದಲ್ಲಿ ಪುರುಷರಿಗಾಗಿ 300 ಹಾಸಿಗೆಗಳ ಹಾಸ್ಟೆಲ್ ಪೂರ್ಣಗೊಂಡಿದೆ. ಅಂದಾಜು ಒಂದು ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಹಾಸ್ಟೆಲ್, ನೆಲ + 4 ಮಹಡಿಗಳಲ್ಲಿದೆ. ಅದರ ನಿವಾಸಿಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಆಧುನಿಕ ಸೌಕರ್ಯಗಳನ್ನು ಹೊಂದಿದೆ.

ಖೇಲೋ ಇಂಡಿಯಾ ಅಡಿಯಲ್ಲಿ 13.86 ಕೋಟಿ ರೂ. ಯೋಜನಾ ವೆಚ್ಚದೊಂದಿಗೆ ನಿರ್ಮಿಸಲಾಗಿರುವ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 400 ಮೀ, 8 ಪಥ ಮತ್ತು ಹುಲ್ಲಿನ ಒಳಭಾಗದೊಂದಿಗೆ ನೇರವಾಗಿ ಹೆಚ್ಚುವರಿ ಎರಡು ಪಥಗಳನ್ನು ಒಳಗೊಂಡಿದೆ. ಸಿಂಥೆಟಿಕ್ ಟ್ರ್ಯಾಕ್ ಪೂರ್ಣ PUR ನೊಂದಿಗೆ ಮತ್ತು ವರ್ಗ-1, ವರ್ಗ-5 ಗಾಗಿ IAAF ಪ್ರಮಾಣೀಕರಣವನ್ನು ಹೊಂದಿದೆ. 8 ಪೂರ್ಣ ಲೇನ್ ಮತ್ತು 2 ಲೇನ್ ಸಿಂಥೆಟಿಕ್ ಟ್ರ್ಯಾಕ್‌ಗಳ ಹೊರತಾಗಿ, ಈ ಯೋಜನೆಯು ಹೆಚ್ಚಿನ ಕಾರ್ಯಕ್ಷಮತೆಯ ತರಬೇತಿಗಾಗಿ 500 ಮೀ. ಆವೆಮಣ್ಣಿನ ಟ್ರ್ಯಾಕ್ ಮತ್ತು 100 ಮೀ. ಮರಳಿನ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್‌ ನ ಮೇಲ್ಮೈ ಕೆಳಗೆ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಂಯೋಜಿತವಾಗಿರುವ ಟೈಮಿಂಗ್ ಗೇಟ್ಸ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಹೊಂದಿದೆ. ಇದು ಅಥ್ಲೆಟಿಕ್ಸ್ ತರಬೇತಿ ಸೌಲಭ್ಯಕ್ಕಾಗಿ ಪೆರಿಮೀಟರ್ ಫೆನ್ಸಿಂಗ್‌‌ ನೊಂದಿಗೆ 250 ಲಕ್ಸ್ ಹೈ ಮಾಸ್ಟ್‌ ಗಳನ್ನು ಹೊಂದಿದೆ.

ಮೂರು ಸೌಲಭ್ಯಗಳ ಉದ್ಘಾಟನೆಯು ಸಾಯ್ ಕೇಂದ್ರಕ್ಕೆ ಒಂದು ನಿರ್ಣಾಯಕ ಕ್ಷಣವಾಗಿದೆ. ಇದರ ವಸತಿ ಸಾಮರ್ಥ್ಯ 1245 ಕ್ಕೆ ತಲುಪುತ್ದೆ ಮತ್ತು ಸಾಯ್ ಬೆಂಗಳೂರಿಗೆ ಹೊಸ ಸ್ಮಾರ್ಟ್ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಅನ್ನು ಸೇರ್ಪಡೆಯಾಗಿದೆ.

ಖ್ಯಾತ ಕ್ರೀಡಾ ಪಟುಗಳಾದ ಶ್ರೀಮತಿ ಅಶ್ವಿನಿ ನಾಚಪ್ಪ, ಶ್ರೀ ಎಸ್‌ ಡಿ ಈಶಾನ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಮೈ ಭಾರತ್ ಸಂವಾದದ ಭಾಗವಾಗಿ, ಶ್ರೀ ಠಾಕೂರ್ ಅವರು ಎನ್‌ ವೈ ಕೆ ಎಸ್‌ ಗೆ ಸಂಬಂಧಿಸಿದ ಯುವಜನರು, ಸಾಯ್ ಅಧಿಕಾರಿಗಳು, ಖ್ಯಾತ ಕ್ರೀಡಾಪಟುಗಳು, ಏಷ್ಯನ್ ಕ್ರೀಡಾಕೂಟ ಪದಕ ವಿಜೇತರಾದ ಶ್ರೀಮನ್‌ಪ್ರೀತ್ ಸಿಂಗ್, ಶ್ರೀ ಅವಿನಾಶ್ ಸೇಬಲ್, ಕುಮಾರಿ ಪಾರುಲ್, ಕುಮಾರಿ ಪ್ರಿಯಾಂಕಾ ಗೋಸ್ವಾಮಿ, ಕುಮಾರಿ ಆನ್ಸಿ ಸೋಜನ್ ಸೇರಿದಂತೆ ನೆರೆದಿದ್ದ ಸುಮಾರು 1100 ಮಂದಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಂತರ ಸಚಿವರು ಏಷ್ಯನ್, ಪ್ಯಾರಾ ಏಷ್ಯನ್ ಕ್ರೀಡಾಕೂಟದ ಖ್ಯಾತ ಕ್ರೀಡಾಪಟುಗಳು ಮತ್ತು ಪದಕ ವಿಜೇತರನ್ನು ಸನ್ಮಾನಿಸಿದರು. ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವು 107 ಮತ್ತು ಪ್ಯಾರಾ ಗೇಮ್ಸ್‌ನಲ್ಲಿ 111 ಪದಕಗಳೊಂದಿಗೆ ಭಾರತವು ಸಾಧಿಸಿದ ಗೆಲುವನ್ನು ಸಚಿವರು ಪುನರುಚ್ಚರಿಸಿದರು. ಏಷ್ಯನ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ನಲ್ಲಿ ಕಂಡ ವಿಶೇಷ ಯಶಸ್ಸನ್ನು ಅವರು ಶ್ಲಾಘಿಸಿದರು. ಏಷ್ಯನ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ 29 ಪದಕಗಳಲ್ಲಿ 14 ಪದಕಗಳು, ಕಬಡ್ಡಿ ಪುರುಷರಲ್ಲಿ ಚಿನ್ನ, ಹಾಕಿ ಪುರುಷರಲ್ಲಿ ಚಿನ್ನ, ಹಾಕಿ ಮಹಿಳೆಯರಲ್ಲಿ ಕಂಚು, ಮಹಿಳೆಯರ ಡಬಲ್ಸ್ ಟೇಬಲ್ ಟೆನಿಸ್‌ ನಲ್ಲಿ ಕಂಚು ಮತ್ತು ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಗಮನಾರ್ಹ ಕೊಡುಗೆಯೊಂದಿಗೆ ಭಾರತದ ಯಶಸ್ಸಿಗೆ ಕೊಡುಗೆ ನೀಡಿದ ಬೆಂಗಳೂರಿನ ಸಾಯ್ ಕೇಂದ್ರವನ್ನು ಸಚಿವರು ಶ್ಲಾಘಿಸಿದರು.

ಸಚಿವರು ಎಸ್‌ಎಐ ಬೆಂಗಳೂರಿನ ವಸತಿಗೃಹದಲ್ಲಿ ಉಳಿದುಕೊಂಡರು ಮತ್ತು ರಾಷ್ಟ್ರೀಯ ತರಬೇತಿ ಶಿಬಿರ (ಎನ್‌‌ ಸಿ ಸಿ), ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಎನ್‌ ಸಿ ಒ ಇ) ನ ಸೌಲಭ್ಯಗಳು ಮತ್ತು ನಡೆಯುತ್ತಿರುವ ತರಬೇತಿಯ ಬಗ್ಗೆ ಮಾಹಿತಿ ಪಡೆದರು. ಶ್ರೀ ಠಾಕೂರ್ ಅವರು ಎನ್‌ ಸಿ ಸಿ, ಎನ್‌ ಸಿ ಒ ಇ ಅಥ್ಲೀಟ್‌ ಗಳು, ತರಬೇತುದಾರರು, ಕ್ರೀಡಾ ವಿಜ್ಞಾನಿಗಳು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಸಚಿವರು ಕ್ರೀಡಾಪಟುಗಳೊಂದಿಗೆ ಭೋಜನ ಸವಿದರು.

***


(Release ID: 1989945)
Read this release in: English , Urdu , Hindi , Telugu