ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಪಾದರಕ್ಷೆ ಮತ್ತು ಚರ್ಮದಲ್ಲಿ ಭಾರತವು ವಿಶ್ವ ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದೆ : ಶ್ರೀ ಪಿಯೂಷ್ ಗೋಯಲ್.


​​​​​​​ಹೊಸ ಪ್ರದೇಶಗಳನ್ನು ಅನ್ವೇಷಿಸಲು, ಆವಿಷ್ಕಾರಿಸಲು ಮತ್ತು ಹೊಸ ಸಹಯೋಗಗಳನ್ನು ರೂಪಿಸಲು ಕೈಗಾರಿಕೆಗಳಿಗೆ ಶ್ರೀ ಗೋಯಲ್ ಸೂಚಿಸಿದರು.

ಸುಗಮ ವ್ಯಾಪಾರೋದ್ಯಮವನ್ನು ಸುಧಾರಿಸಲು ಆಲೋಚನೆಗಳು ಮತ್ತು ಸಲಹೆಗಳನ್ನು ನೀಡಿ: ಚರ್ಮ ಉದ್ಯಮಕ್ಕೆ ಶ್ರೀ ಗೋಯಲ್ ಸೂಚನೆ

ಹೊಸ ಉದ್ಯಮಿಗಳ ಕೊಡುಗೆಯನ್ನು ಗುರುತಿಸಲು ಕೆಲವು ಪ್ರಮುಖ ಪ್ರಶಸ್ತಿ ವಿಭಾಗಗಳನ್ನು ರಚಿಸಲು ಶ್ರೀ ಗೋಯಲ್ ಸಲಹೆ 

ಜಾಗತಿಕವಾಗಿ ಬೆಳೆಯಲು ಎಫ್ ಟಿಎಗಳನ್ನು ಬಳಸಿ; ಯುಎಇ ಜತೆಗಿನ ಎಫ್ ಟಿಎ ನವೆಂಬರ್ ನಲ್ಲಿ ಆ ದೇಶಕ್ಕೆ ಚರ್ಮದ ರಫ್ತಿನಲ್ಲಿ ಶೇ.64ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ: ಶ್ರೀ ಗೋಯಲ್

Posted On: 03 JAN 2023 9:28PM by PIB Bengaluru

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು, ಸರ್ಕಾರ ಮತ್ತು ಕೈಗಾರಿಕೆಗಳ ಪ್ರಯತ್ನಗಳಿಂದ ಪಾದರಕ್ಷೆ ಮತ್ತು ಚರ್ಮ ಕ್ಷೇತ್ರದಲ್ಲಿ ಭಾರತವು ವಿಶ್ವ ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ನವದೆಹಲಿಯಲ್ಲಿ ಇಂದು (ಮಂಗಳವಾರ) ನಡೆದ ಕೌನ್ಸಿಲ್ ಫಾರ್ ಲೆದರ್ ಎಕ್ಸ್ ಪೋರ್ಟ್ಸ್ ರಾಷ್ಟ್ರೀಯ ರಫ್ತು ಉತ್ಕೃಷ್ಟತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಶಸ್ತಿ ಪುರಸ್ಕೃತರನ್ನುದ್ದೇಶಿಸಿ ಭಾಷಣ ಮಾಡಿದ ಶ್ರೀ ಪಿಯೂಷ್ ಗೋಯಲ್ ಅವರು, ಹೊಸ ಕಂಪನಿಗಳು, ಉದ್ಯಮಿಗಳು, ನವೋದ್ಯಮಗಳು ಮತ್ತು ನವೀನ ಆಲೋಚನೆಗಳೊಂದಿಗೆ ಬರುವವರು, ಹೊಸ ಮಾರುಕಟ್ಟೆಗಳು ಮತ್ತು ಉತ್ಪನ್ನಗಳೊಂದಿಗೆ ಅಜ್ಞಾತ ಪ್ರದೇಶಕ್ಕೆ ಪ್ರವೇಶಿಸಲು ಈ ಪ್ರಶಸ್ತಿಗಳ ಮೂಲಕ ಅವುಗಳನ್ನು ಗುರುತಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಸಾಧ್ಯತೆಯನ್ನು ಅನ್ವೇಷಿಸುವಂತೆ ಸಂಘಟಕರಿಗೆ ಸೂಚಿಸಿದರು. ಎಫ್ ಟಿಎ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಬಳಸುವವರಿಗೆ ಬಹುಮಾನ ನೀಡುವಂತಹ ಅವರ ಕೊಡುಗೆಯನ್ನು ಗುರುತಿಸಲು ಕೆಲವು ಪ್ರಮುಖ ಪ್ರಶಸ್ತಿ ವಿಭಾಗಗಳನ್ನು ರಚಿಸಬಹುದು ಎಂದು ಅವರು ಸಲಹೆ ನೀಡಿದರು.
ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ, ಸರಕು ಮತ್ತು ಸೇವೆಗಳೆರಡರಲ್ಲೂ ಕಳೆದ ವರ್ಷಕ್ಕಿಂತ ಹೆಚ್ಚಿನ ರಫ್ತುಗಳನ್ನು ಸಾಧಿಸಲು ನಾವು ಆಶಿಸುತ್ತೇವೆ ಎಂದು ಸಚಿವರು ಹೇಳಿದರು. ಚರ್ಮದ ಉತ್ಪನ್ನಗಳ ದೊಡ್ಡ ಗ್ರಾಹಕರಾಗಿರುವ ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳು ಹಣದುಬ್ಬರ ಮತ್ತು ಗ್ರಾಹಕ ವೆಚ್ಚವನ್ನು ಕಡಿಮೆಗೊಳಿಸುತ್ತಿರುವಾಗ, ಕಳೆದ ವರ್ಷಕ್ಕೆ ಹೋಲಿಸಿದರೆ ಚರ್ಮ ವಲಯವು ಹೆಚ್ಚಿನ ಬೆಳವಣಿಗೆಯನ್ನು ಕಾಣಲಿದೆ ಎಂಬ ಭರವಸೆಯನ್ನು ಕಾಣಲು ಸಂತೋಷವಾಗಿದೆ ಎಂದು ಅವರು ಹೇಳಿದರು.

ಶ್ರೀ ಪಿಯೂಷ್ ಗೋಯಲ್ ಅವರು ಚರ್ಮ ಉದ್ಯಮವು ಬೆಳೆಯಲು ವಿವಿಧ ರಾಷ್ಟ್ರಗಳೊಂದಿಗೆ ಭಾರತ ಸಹಿ ಹಾಕುತ್ತಿರುವ ಎಫ್ ಟಿಎಗಳನ್ನು ಬಳಸಿಕೊಳ್ಳುವಂತೆ ಕೇಳಿಕೊಂಡರು. ಯುಎಇಯ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಹೊಸ ಒಪ್ಪಂದದ ಪರಿಣಾಮವಾಗಿ ಕಳೆದ ವರ್ಷ ನವೆಂಬರ್ ನಲ್ಲಿ ಈ ವಲಯದ ರಫ್ತು ಶೇ. 64 ರಷ್ಟು ಜಿಗಿತವನ್ನು ದಾಖಲಿಸಿದೆ ಎಂದು ಮಾಹಿತಿ ನೀಡಿದರು.

ಕೆಲವು ರೀತಿಯ ಚರ್ಮದ ಮೇಲಿನ ಆಮದು ಸುಂಕದ ಬಗ್ಗೆ ಚರ್ಮ ಉದ್ಯಮದ ಕಳವಳಗಳನ್ನು ಗಮನಿಸಿದ ಅವರು, ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಂದಾಯ ಇಲಾಖೆಯಿಂದ ಎಂಒಒಡಬ್ಲ್ಯೂಆರ್ ಯೋಜನೆಯನ್ನು ಪಡೆಯುವಂತೆ ಅವರು ಉದ್ಯಮದ ಮಧ್ಯಸ್ಥಗಾರರನ್ನು ಒತ್ತಾಯಿಸಿದರು, ಇದರಲ್ಲಿ ರಫ್ತು ಉದ್ದೇಶಕ್ಕಾಗಿ ಆಮದು ಮಾಡಿಕೊಳ್ಳಲಾಗುತ್ತಿರುವ ಸರಕುಗಳ ಮೇಲೆ ಯಾವುದೇ ಸುಂಕವನ್ನು ಪಾವತಿಸಲಾಗುವುದಿಲ್ಲ. ಇದು ಖಂಡಿತವಾಗಿಯೂ ವ್ಯವಹಾರವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಭಾರತೀಯ ಉದ್ಯಮವು ಅಗಾಧವಾದ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಸಚಿವರು, ತಯಾರಾದ ಉತ್ಪನ್ನಗಳ ಗುಣಮಟ್ಟವು ಉತ್ತಮವಾಗಿದ್ದರೂ, ಉತ್ಪನ್ನಕ್ಕೆ ಉತ್ತಮ ಮೌಲ್ಯವನ್ನು ಪಡೆಯಲು ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಮೇಲೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ವಿಶ್ವದಾದ್ಯಂತದ ಭಾರತೀಯ ಮಿಷನ್ ಪ್ರಭಾವದ ವಿಷಯದಲ್ಲಿ ಬೆಂಬಲವನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ಬ್ರ್ಯಾಂಡಿಂಗ್ ವ್ಯವಹಾರದಲ್ಲಿ ತೊಡಗಿರುವ ಅಂತಾರಾಷ್ಟ್ರೀಯ ಕಂಪನಿಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ವಿಶೇಷವಾಗಿ ಭಾರತವು ಅಮೃತ್ ಕಾಲನ್ನು ಪ್ರವೇಶಿಸುತ್ತಿರುವಾಗ, ಹೊಸ ಗುರಿಗಳನ್ನು ನಿಗದಿಪಡಿಸಲು ಅವರು ಉದ್ಯಮವನ್ನು ಉತ್ತೇಜಿಸಿದರು, ಇದು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ ಮತ್ತು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸಮೃದ್ಧಿಯನ್ನು ತರುವ ಗುರಿಯನ್ನು ಹೊಂದಿದೆ. ನಾವು ವಿಶ್ವದ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಹೆಚ್ಚಿನ ಎಫ್ ಟಿಎಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು. ಚರ್ಮ ಮತ್ತು ಪಾದರಕ್ಷೆ ಉದ್ಯಮವು ಮುಂದಿನ 25 ವರ್ಷಗಳಲ್ಲಿ ಗಮನಾರ್ಹ ಹೆಚ್ಚಳದ ಗುರಿಯನ್ನು ಹೊಂದಿರಬೇಕು ಮತ್ತು ಆ ಗುರಿಗಳನ್ನು ಸಾಧಿಸಲು ಯೋಜನೆಯನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು. ಜತೆಗೆ ಹೊಸ ಭೂಪ್ರದೇಶಗಳನ್ನು ಅನ್ವೇಷಿಸಿ, ಆಮದು ಬದಲಿಗಾಗಿ ಭಾರತದಲ್ಲಿ ಹೊಸ ಉತ್ಪನ್ನಗಳನ್ನು ತಯಾರಿಸುವ ಪ್ರದೇಶಗಳನ್ನು ವಿಸ್ತರಿಸುವತ್ತ ಗಮನ ಹರಿಸುವಂತೆ ಸೂಚಿಸಿದರು.

ಉದ್ಯಮದ ಹಿತಾಸಕ್ತಿಗಳಿಗೆ ಧಕ್ಕೆಯುಂಟುಮಾಡುವ ಯಾವುದೇ ಮಾನದಂಡಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಮುಕ್ತವಾಗಿದೆ ಎಂದು ಶ್ರೀ ಪಿಯೂಷ್ ಗೋಯಲ್ ಭರವಸೆ ನೀಡಿದರು. ಉದ್ಯಮದ ಅಗತ್ಯಗಳನ್ನು ಪೂರೈಸಲು ದೇಶದ ಯಾವುದೇ ಭಾಗದಲ್ಲಿ ಪರೀಕ್ಷಾ ಸೌಲಭ್ಯಗಳು / ಪ್ರಯೋಗಾಲಯಗಳನ್ನು ಸ್ಥಾಪಿಸುವ ವಿಷಯದಲ್ಲಿ ಸಂಪೂರ್ಣ ಬೆಂಬಲದ ಭರವಸೆಯನ್ನು ಅವರು ನೀಡಿದರು. ಸುಗಮ ವ್ಯಾಪಾರೋದ್ಯಮದ ಬಗ್ಗೆ ಉದ್ಯಮದೊಂದಿಗೆ ತೊಡಗಿಸಿಕೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ ಅವರು, ಉದ್ಯಮವು ವ್ಯವಹಾರದಲ್ಲಿ ತೊಂದರೆಯನ್ನು ಎದುರಿಸುತ್ತಿರುವ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಯನ್ನು ಹೇಗೆ ತರುವುದು ಎಂಬುದರ ಕುರಿತು ಸಲಹೆಗಳನ್ನು ನೀಡುವಂತೆ ಕೋರಿದರು. ಅನುಸರಣೆಯನ್ನು ಹೇಗೆ ಹೆಚ್ಚಿಸುವುದು, ಕಾನೂನುಗಳನ್ನು ಹೇಗೆ ಸರಳೀಕರಿಸುವುದು ಮತ್ತು ಯಾವ ಕಾನೂನುಗಳು / ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸಬಹುದು ಎಂಬುದರ ಬಗ್ಗೆ ಸಲಹೆಗಳನ್ನು ನೀಡುವಂತೆ ಅವರು ಅವರನ್ನು ಕೇಳಿದರು.

ಕೈಗಾರಿಕೆಗೆ ಅಗತ್ಯವಿರುವ ಯಂತ್ರೋಪಕರಣಗಳ ಉತ್ಪಾದನೆಯನ್ನು ಬೆಂಬಲಿಸಲು ಸರ್ಕಾರವು ಹೊಸ ಯೋಜನೆಯನ್ನು ರೂಪಿಸಲು ಕಾರ್ಯೋನ್ಮುಖವಾಗಿದೆ ಎಂದು ಶ್ರೀ ಪಿಯೂಷ್ ಗೋಯಲ್ ಮಾಹಿತಿ ನೀಡಿದರು. ಹಾಗೆಯೇ ಸರ್ಕಾರದ ಎಲ್ಲಾ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತೆ ಅವರು ಉದ್ಯಮಕ್ಕೆ ಕೋರಿದರು.

ತಮ್ಮ ಉತ್ಪನ್ನಗಳಲ್ಲಿ ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ಕಂಡುಕೊಳ್ಳುವಂತೆ ಅವರು ಉದ್ಯಮಕ್ಕೆ ಸೂಚಿಸಿದರು. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಭಾರತಕ್ಕೆ ತರಲು ಅಂತಾರಾಷ್ಟ್ರೀಯ ಕಂಪನಿಗಳೊಂದಿಗೆ ಹೊಸ ಸಹಯೋಗಕ್ಕೆ ಅವರು ಕರೆ ನೀಡಿದರು. ಕೊಲ್ಹಾಪುರಿ ಚಪ್ಪಲ್ ಗಳಂತಹ ಅಪಾರ ಸಾಮರ್ಥ್ಯದ ಕೆಲವು ಕ್ಷೇತ್ರಗಳ ಬಗ್ಗೆ ಮಾತನಾಡಿದ ಸಚಿವರು, ಯುವ ಉದ್ಯಮಿಗಳು ದಿನಚರಿಯನ್ನು ಮೀರಿ ಈ ಪ್ರದೇಶದಲ್ಲಿ ಹೊಸ ವಿನ್ಯಾಸಗಳು / ಬ್ರ್ಯಾಂಡಿಂಗ್ ಅನ್ನು ಅನ್ವೇಷಿಸಲು ಹೇಳಿದರು.

*****



(Release ID: 1888492) Visitor Counter : 153


Read this release in: English , Urdu , Hindi