ಪ್ರಧಾನ ಮಂತ್ರಿಯವರ ಕಛೇರಿ

ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ - ಅಶಾರ ಮುಬಾರಕದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ 

Posted On: 13 SEP 2018 2:13PM by PIB Bengaluru

ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ - ಅಶಾರ ಮುಬಾರಕದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ 
 

2018ರ ಸೆಪ್ಟೆಂಬರ್ 14ರಂದು ಇಂದೋರ್ ನಲ್ಲಿ ದಾವೂದಿ ಬೋಹ್ರಾ ಸಮುದಾಯ ಆಯೋಜಿಸಿರುವ ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ - ಅಶಾರ ಮುಬಾರಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.

ಅಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ದಾವೂದಿ ಬೋಹ್ರಾ ಸಮುದಾಯದ ಆಧ್ಯಾತ್ಮಿಕ ಮುಖ್ಯಸ್ಥ ಪರಮಪೂಜ್ಯ ಡಾ. ಸ್ಯೆದ್ನಾ ಮುಫದ್ದಲ್ ಸೈಫುದ್ದೀನ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ಭಾಷಣಗಳನ್ನೂ ಒಳಗೊಂಡಿದೆ.
 

***



(Release ID: 1546094) Visitor Counter : 83