ಪ್ರಧಾನ ಮಂತ್ರಿಯವರ ಕಛೇರಿ

ಈಜಿಪ್ಟ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ ಪ್ರಧಾನಿ

Posted On: 24 NOV 2017 10:40PM by PIB Bengaluru

ಈಜಿಪ್ಟ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ ಪ್ರಧಾನಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಜಿಪ್ಟ್ ನ ಪ್ರಾರ್ಥನಾ ಸ್ಥಳದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಈ ದಾಳಿ ಅನಾಗರಿಕವಾದದ್ದು ಎಂದಿರುವ ಪ್ರಧಾನಿ, ಮುಗ್ಧ ಜೀವಗಳ ಹಾನಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ ಮತ್ತು ಭಯೋತ್ಪಾದನೆಯ ಎಲ್ಲ ಸ್ವರೂಪದ ವಿರುದ್ಧ ಹೋರಾಟ ನಡೆಸಲು ಈಜಿಪ್ಟ್ ಗೆ ಭಾರತದ ಅಚಲ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. 

“ಈಜಿಪ್ಟ್ ನ ಪ್ರಾರ್ಥನಾ ಸ್ಥಳದ ಮೇಲೆ ನಡೆದ ಅನಾಗರಿಕ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಮುಗ್ಧ ಜೀವಗಳ ಹಾನಿಗೆ ನಮ್ಮ ಆಳವಾದ ಸಂತಾಪಗಳು. ಭಾರತವು ಎಲ್ಲಾ ಸ್ವರೂಪದ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ದೃಢವಾಗಿ ಬೆಂಬಲಿಸುತ್ತದೆ ಮತ್ತು ಈಜಿಪ್ಟಿನ ಸರ್ಕಾರ ಹಾಗೂ ಜನರೊಂದಿಗೆ ನಿಲ್ಲುತ್ತದೆ” ಎಂದು ಪ್ರಧಾನಿ ಹೇಳಿದ್ದಾರೆ. 
 

****



(Release ID: 1510955) Visitor Counter : 73


Read this release in: English , Tamil