ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಆರ್ಥಿಕ ಸವಾಲುಗಳಿಂದ ಶೈಕ್ಷಣಿಕ ವೃತ್ತಿಜೀವನದವರೆಗೆ: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ರಾಷ್ಟ್ರೀಯ ಫೆಲೋಶಿಪ್ (ಎನ್.ಎಫ್.ಎಸ್.ಸಿ) ಯೋಜನೆಯ ಬೆಂಬಲವು ಡಾ. ಜಾನಕಿ ಸುಂದರರಾಜನ್ ಅವರನ್ನು ಸಂಪೂರ್ಣವಾಗಿ ಸಬಲೀಕರಣಗೊಳಿಸಿತು

ಪ್ರಕಟಣಾ ದಿನಾಂಕ: 28 AUG 2026 3:31PM by PIB Bengaluru

ಸಾಧಾರಣ ಕುಟುಂಬಗಳ ಪೂರ್ಣ ಸಮಯದ ಸಂಶೋಧನಾ ವಿದ್ವಾಂಸರಿಗೆ, ಉನ್ನತ ಶಿಕ್ಷಣದ ವೆಚ್ಚವನ್ನು ಪೂರೈಸುವುದು ಕಷ್ಟಕರವಾಗಿರುತ್ತದೆ. ಸಕಾಲಿಕ ಫೆಲೋಶಿಪ್ ನೆರವು ಈ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ವಿದ್ವಾಂಸರು ತಮ್ಮ ಶೈಕ್ಷಣಿಕ ಮಹತ್ವಾಕಾಂಕ್ಷೆಗಳನ್ನು ಹೆಚ್ಚಿನ ಆತ್ಮವಿಶ್ವಾಸ ಮತ್ತು ಗಮನದಿಂದ ಮುಂದುವರಿಸಲು ಅನುವು ಮಾಡಿಕೊಡುತ್ತದೆ.

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್ (ಎನ್.ಎಫ್.ಎಸ್.ಸಿ) ಯೋಜನೆಯಡಿಯಲ್ಲಿ ಬೆಂಬಲದ ಪರಿಣಾಮವನ್ನು ಯಶಸ್ವಿಯಾಗಿ ನಿಭಾಯಿಸುತ್ತಾ, ತಮಿಳುನಾಡಿನ ದಿಂಡಿಗಲ್ ನ 32 ವರ್ಷದ ವಿದ್ವಾಂಸೆ ಡಾ. ಜಾನಕಿ ಸುಂದರರಾಜನ್ ಅವರಿಗೆ, ತಮ್ಮ ಪಿ.ಎಚ್.ಡಿ. ಪೂರ್ಣಗೊಳಿಸಲು ಮತ್ತು ಬೋಧನೆ ಮತ್ತು ಸಂಶೋಧನೆಯಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಆರ್ಥಿಕ ಮತ್ತು ಶೈಕ್ಷಣಿಕ ಅಡೆತಡೆಗಳನ್ನು ನಿವಾರಿಸಿಲು ಸಾಧ್ಯವಾಯಿತು.

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್ (ಎನ್.ಎಫ್.ಎಸ್.ಸಿ) ಯೋಜನೆಯಡಿಯಲ್ಲಿ ನೆರವು ಪಡೆಯುವ ಮೊದಲು, ಡಾ. ಜಾನಕಿ ಅವರು 2019 ರಿಂದ 2024 ರವರೆಗಿನ ತಮ್ಮ ಪಿ.ಎಚ್.ಡಿ ಅವಧಿಯಲ್ಲಿ ಸಂಶೋಧನಾ ವೆಚ್ಚಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಿದರು. ಪೂರ್ಣ ಸಮಯದ ಸಂಶೋಧನಾ ವಿದ್ಯಾರ್ಥಿನಿಯಾಗಿ, ಸ್ಥಿರವಾದ ಆರ್ಥಿಕ ಬೆಂಬಲವಿಲ್ಲದೆ ವೈಯಕ್ತಿಕ ಜವಾಬ್ದಾರಿಗಳನ್ನು ಸಮತೋಲನಗೊಳಿಸುವುದು ಮತ್ತು ಅವರ ಸಂಶೋಧನೆಯನ್ನು ಮುಂದುವರಿಸುವುದು ಸವಾಲಿನದ್ದಾಗಿತ್ತು.

ಸಂಶೋಧನಾ ಸಾಮಗ್ರಿಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಪ್ರವೇಶಿಸುವುದು, ಸಮ್ಮೇಳನಗಳಿಗೆ ಹಾಜರಾಗುವುದು, ಕ್ಷೇತ್ರಕಾರ್ಯ ನಡೆಸುವುದು, ದತ್ತಾಂಶ ಸಂಗ್ರಹಿಸುವುದು, ಶೈಕ್ಷಣಿಕ ಉದ್ದೇಶಗಳಿಗಾಗಿ ಪ್ರಯಾಣಿಸುವುದು ಮತ್ತು ಪ್ರಕಟಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಅವರು ತೊಂದರೆ ಅನುಭವಿಸಿದರು. ಸೀಮಿತ ಅವಧಿಯೊಳಗೆ ದೊರೆತ ಸಕಾಲಿಕ ಆರ್ಥಿಕ ನೆರವು ಅವರ ಡಾಕ್ಟರೇಟ್ ಸಂಶೋಧನೆಯ ಮೇಲೆ ಸಂಪೂರ್ಣವಾಗಿ ಗಮನಹರಿಸುವ ಸಾಮರ್ಥ್ಯದ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಿತು.

ಈ ರೀತಿಯ ಹಲವು ಆರ್ಥಿಕ ನಿರ್ಬಂಧಗಳ ಹೊರತಾಗಿಯೂ, ಡಾ. ಜಾನಕಿ ಅವರು ತಮ್ಮ ಶೈಕ್ಷಣಿಕ ಪ್ರಯಾಣಕ್ಕೆ ಬದ್ಧರಾಗಿದ್ದರು. ಅವರು ತಮ್ಮ ಪಿಎಚ್ಡಿ ಪೂರ್ಣಗೊಳಿಸಲು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಶಿಕ್ಷಣ, ಡಿಜಿಟಲ್ ಶಿಕ್ಷಣ ಮತ್ತು ಗುಣಮಟ್ಟದ ಸಂಶೋಧನೆಯ ಮೇಲೆ ಕೇಂದ್ರೀಕರಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಿತ ಶಿಕ್ಷಣತಜ್ಞ ಮತ್ತು ಸಂಶೋಧಕರಾಗಲು ಆಶಿಸಿದರು.

ಡಾ. ಜಾನಕಿ ಅವರು ಸಾಧಾರಣ ಕುಟುಂಬ ಹಿನ್ನೆಲೆಯಿಂದ ಬಂದವರು, ಅಲ್ಲಿ ಆರ್ಥಿಕ ಮಿತಿಗಳ ಹೊರತಾಗಿಯೂ ಶಿಕ್ಷಣವನ್ನು ಮುಖ್ಯವೆಂದು ಪರಿಗಣಿಸಲಾಗಿತ್ತು. ಅವರ ಕುಟುಂಬವು ಅವರ ಉನ್ನತ ಶಿಕ್ಷಣ ಪ್ರಯಾಣವನ್ನು ನಿರಂತರವಾಗಿ ಪ್ರೋತ್ಸಾಹಿಸಿತು, ಆದರೆ ಪೂರ್ಣ ಸಮಯದ ಸಂಶೋಧನೆಗೆ ಸಂಬಂಧಿಸಿದ ವೆಚ್ಚಗಳನ್ನು ಪೂರೈಸುವುದು ಮನೆಯ ಮೇಲೆ ಗಣನೀಯ ಒತ್ತಡವನ್ನುಂಟುಮಾಡಿತು.

ಅವರು ಸೆಪ್ಟೆಂಬರ್ 2019ರಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ರಾಷ್ಟ್ರೀಯ ಫೆಲೋಶಿಪ್ (ಎನ್.ಎಫ್.ಎಸ್.ಸಿ) ಯೋಜನೆಯಡಿಯಲ್ಲಿ ಸಹಾಯವನ್ನು ಪಡೆಯಲು ಪ್ರಾರಂಭಿಸಿದರು. ಯೋಜನೆಯಡಿಯಲ್ಲಿ, ಅವರು ತಿಂಗಳಿಗೆ ₹35,000 ಹಿರಿಯ ಸಂಶೋಧನಾ ಫೆಲೋಶಿಪ್ ಕೂಡಾ ಪಡೆದರು.

ಸಂಶೋಧನಾ ಸಾಮಗ್ರಿಗಳು, ಇಂಟರ್ನೆಟ್ ಪ್ರವೇಶ, ದತ್ತಾಂಶ ಸಂಗ್ರಹಣೆ, ಶೈಕ್ಷಣಿಕ ಪ್ರಯಾಣ ಮತ್ತು ಪ್ರಕಟಣೆ ಚಟುವಟಿಕೆಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ನಿರ್ವಹಿಸಲು ಫೆಲೋಶಿಪ್ ಅವರಿಗೆ ಸಹಾಯ ಮಾಡಿತು. ಇದು ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಿತು, ಆತ್ಮವಿಶ್ವಾಸ ಹಾಗೂ ಸಮರ್ಪಣಾಭಾವದಿಂದ ಮತ್ತು ಅವರ ಪಿ.ಎಚ್.ಡಿ. ಪೂರ್ಣಗೊಳಿಸುವತ್ತ ಹೆಚ್ಚು ಪರಿಣಾಮಕಾರಿಯಾಗಿ ಗಮನಹರಿಸಲು ಅನುವು ಮಾಡಿಕೊಟ್ಟಿತು. 

ಆರ್ಥಿಕ ನೆರವಿನ ಜೊತೆಗೆ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ರಾಷ್ಟ್ರೀಯ ಫೆಲೋಶಿಪ್ (ಎನ್.ಎಫ್.ಎಸ್.ಸಿ) ಫೆಲೋಶಿಪ್ , ಡಾ. ಜಾನಕಿ ಅವರಿಗೆ ಅವರ ಡಾಕ್ಟರೇಟ್ ಶಿಕ್ಷಣದ ಪ್ರಯಾಣದ ಉದ್ದಕ್ಕೂ ಸ್ಥಿರತೆ ಮತ್ತು ಪ್ರೇರಣೆಯನ್ನು ಒದಗಿಸಿತು. ಇದು ಅವರ ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನಾ ಕಾರ್ಯ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಿತು ಮತ್ತು ಅವರ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿತು. 

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ರಾಷ್ಟ್ರೀಯ ಫೆಲೋಶಿಪ್ (ಎನ್.ಎಫ್.ಎಸ್.ಸಿ) ಯೋಜನೆಯಡಿಯಲ್ಲಿ ಪಡೆದ ಬೆಂಬಲದೊಂದಿಗೆ, ಅವರು ತಮ್ಮ ಪಿ.ಎಚ್.ಡಿ. ಸಂಶೋಧನೆಯನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಮತ್ತು ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನಾ ಪ್ರಕಟಣೆಗಳು ಮತ್ತು ವೃತ್ತಿಪರ ಅಭಿವೃದ್ಧಿಗೆ ಹೆಚ್ಚಿನ ಗಮನವನ್ನು ನೀಡುವ ಆತ್ಮವಿಶ್ವಾಸವನ್ನು ಪಡೆದರು. ಈ ನೆರವು ಅವರ ವೃತ್ತಿಪರ ಬೆಳವಣಿಗೆ ಮತ್ತು ವೈಯಕ್ತಿಕ ವಿಶ್ವಾಸ ಎರಡನ್ನೂ ಬಲಪಡಿಸಿತು.

ಡಾ. ಜಾನಕಿ ಪ್ರಸ್ತುತ ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯಲ್ಲಿ (ಈ ಸಂಸ್ಥೆಯನ್ನು ಸ್ವಾಯತ್ತ ವಿಶ್ವವಿದ್ಯಾಲಯ ಎಂದು ಪರಿಗಣಿಸಲಾಗಿದೆ) ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆಲೋಶಿಪ್ ಅವರ ಶೈಕ್ಷಣಿಕ ವೃತ್ತಿಜೀವನದ ಹಾದಿಯನ್ನು ಬಲಪಡಿಸಿದೆ ಮತ್ತು ಬೋಧನೆ ಮತ್ತು ಸಂಶೋಧನೆಯ ಮೂಲಕ ಶಿಕ್ಷಣಕ್ಕೆ ಕೊಡುಗೆ ನೀಡುವ ಗುರಿಯನ್ನು ತಲುಪಲು ಅನುವು ಮಾಡಿಕೊಟ್ಟಿದೆ.

ಡಾ. ಜಾನಕಿ ಅವರು ಫೆಲೋಶಿಪ್ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಈ ರೀತಿ ತಮ್ಮ ಆಶಯವನ್ನು ವ್ಯಕ್ತಪಡಿಸಿದರು,

"ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ರಾಷ್ಟ್ರೀಯ ಫೆಲೋಶಿಪ್ (ಎನ್.ಎಫ್.ಎಸ್.ಸಿ) ನನಗೆ ಆರ್ಥಿಕ ಸ್ಥಿರತೆ ಮತ್ತು ನನ್ನ ಪಿ.ಎಚ್.ಡಿ. ಸಂಶೋಧನೆಯನ್ನು ಅಡೆತಡೆಯಿಲ್ಲದೆ ಮುಂದುವರಿಸುವ ವಿಶ್ವಾಸವನ್ನು ಒದಗಿಸಿತು. ಇದು ನನ್ನ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿತು, ನನ್ನ ಸಂಶೋಧನೆ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಿತು ಮತ್ತು ಬೋಧನೆ ಮತ್ತು ಸಂಶೋಧನೆಯಲ್ಲಿ ವೃತ್ತಿಜೀವನದತ್ತ ನನ್ನ ಹಾದಿಯನ್ನು ಬಲಪಡಿಸಿತು."

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ರಾಷ್ಟ್ರೀಯ ಫೆಲೋಶಿಪ್ (ಎನ್.ಎಫ್.ಎಸ್.ಸಿ) ಯೋಜನೆಯಡಿಯಲ್ಲಿ ದೃಢನಿಶ್ಚಯ ಮತ್ತು ಬೆಂಬಲದ ಮೂಲಕ, ಡಾ. ಜಾನಕಿ ಅವರು ಪೂರ್ಣ ಸಮಯದ ಸಂಶೋಧನೆಯ ಸಮಯದಲ್ಲಿ ಆರ್ಥಿಕ ಸವಾಲುಗಳನ್ನು ಎದುರಿಸುವುದರಿಂದ ಪಿ.ಎಚ್.ಡಿ. ಪೂರ್ಣಗೊಳಿಸಲು ಮತ್ತು ಶೈಕ್ಷಣಿಕ ವೃತ್ತಿಜೀವನವನ್ನು ಮುಂದುವರಿಸಲು ಮುಂದುವರೆದರು. ಅವರ ಪ್ರಯಾಣವು ಸಂಶೋಧನಾ ಆಕಾಂಕ್ಷೆಗಳನ್ನು ಮುಂದುವರಿಸುವಲ್ಲಿ ಮತ್ತು ವೃತ್ತಿಪರ ಅವಕಾಶಗಳನ್ನು ಬಲಪಡಿಸುವಲ್ಲಿ ಫೆಲೋಶಿಪ್ ನೆರವಿನ ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2304294) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu