ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಅಪೌಷ್ಟಿಕತೆಯ ಕಳವಳಗಳನ್ನು ನಿವಾರಿಸಲು ಮತ್ತು ಮಹಿಳೆಯರು ಮತ್ತು ಮಕ್ಕಳ ಸಬಲೀಕರಣ, ಅಭಿವೃದ್ಧಿ ಮತ್ತು ರಕ್ಷಣೆಗಾಗಿ ವ್ಯೂಹಾತ್ಮಕ ಮಧ್ಯಸ್ಥಿಕೆಗಳ ವಲಯ ಸಮಾವೇಶಗಳ ಮೂಲಕ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಮತ್ತು ಬಾಧ್ಯಸ್ಥರೊಂದಿಗೆ ಜನಸಂಪರ್ಕ ಸಾಧಿಸುವುದು.

Posted On: 03 APR 2022 4:29PM by PIB Bengaluru

ಭಾರತದ ಜನಸಂಖ್ಯೆಯ ಶೇ.67.7ರಷ್ಟು ಮಹಿಳೆಯರು ಮತ್ತು ಮಕ್ಕಳಿದ್ದು, ಅವರ ಸಬಲೀಕರಣ, ಸುಭದ್ರ ಮತ್ತು ಸುರಕ್ಷಿತ ವಾತಾವರಣದಲ್ಲಿ  ಅವರ ಆರೋಗ್ಯಕರ ಅಭಿವೃದ್ಧಿಯನ್ನು ಖಾತ್ರಿಪಡಿಸುವುದು ದೇಶದ ಸುಸ್ಥಿರ ಮತ್ತು ಸಮಾನತೆಯ ಅಭಿವೃದ್ಧಿಗೆ ಮತ್ತು ಪರಿವರ್ತನಾತ್ಮಕ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಸಾಧಿಸಲು ನಿರ್ಣಾಯಕವಾಗಿದೆ.  
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮುಖ್ಯ ಉದ್ದೇಶವೆಂದರೆ ಮಹಿಳೆಯರು ಮತ್ತು ಮಕ್ಕಳಿಗಾಗಿ ರಾಜ್ಯಗಳ ಕ್ರಮದಲ್ಲಿರುವ ಅಂತರವನ್ನು ನಿವಾರಿಸುವುದು ಮತ್ತು ಲಿಂಗ ಸಮಾನತೆಯ ಮತ್ತು ಮಕ್ಕಳ ಕೇಂದ್ರಿತ ಕಾನೂನು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಅಂತರ ಸಚಿವಾಲಯ ಮತ್ತು ಅಂತರ-ವಲಯ ಸಮನ್ವಯವನ್ನು ಉತ್ತೇಜಿಸುವುದು ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ಎಲ್ಲಾ ರೀತಿಯ ತಾರತಮ್ಯ ಮತ್ತು ಹಿಂಸೆಯಿಂದ ಮುಕ್ತವಾದ, ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಮುಕ್ತವಾದ ವಾತಾವರಣವನ್ನು ಒದಗಿಸುವುದಾಗಿದೆ.  ಈ ನಿಟ್ಟಿನಲ್ಲಿ, ಸಚಿವಾಲಯದ ಯೋಜನೆಗಳ ಅಡಿಯಲ್ಲಿ ಉದ್ದೇಶಗಳನ್ನು ಈಡೇರಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಬೆಂಬಲದೊಂದಿಗೆ ಪ್ರಯತ್ನಿಸುವುದಾಗಿದ್ದು, ಅದು ಸಾಕಾರವಾಗಲು ಯೋಜನೆಗಳ ನಿರ್ವಹಣೆಗೆ ಜವಾಬ್ದಾರರಾಗಿರುತ್ತವೆ.
ಈ ಮೇಲಿನ ಉದ್ದೇಶಗಳನ್ನು ಸಾಧಿಸಲು, ಅಭಿಯಾನದೋಪಾದಿಯಲ್ಲಿ ಅನುಷ್ಠಾನಗೊಳಿಸಲು ಸಚಿವಾಲಯದ 3 ಪ್ರಮುಖ ಅಂಬ್ರೆಲಾ ಯೋಜನೆಗಳನ್ನು ಸಂಪುಟವು ಅನುಮೋದಿಸಿದೆ, ಅವುಗಳೆಂದರೆ ಪೋಷಣ್ ಅಭಿಯಾನ 2.0, ಶಕ್ತಿ ಅಭಿಯಾನ (ಮಿಷನ್ ಶಕ್ತಿ) ಮತ್ತು ವಾತ್ಸಲ್ಯ ಅಭಿಯಾನ.   2021-22 ರಿಂದ 2025-26 ರವರೆಗೆ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಎಲ್ಲಾ 3 ಅಭಿಯಾನಗಳನ್ನು ಅನುಷ್ಠಾನಗೊಳಿಸಲಾಗುವುದು.
ಪೋಷಣ್  ಅಭಿಯಾನ 2.0 - ಒಂದು ಸಮಗ್ರ ಪೋಷಕಾಂಶವರ್ಧನೆಗೆ ಉತ್ತೇಜನ ನೀಡುವ ಕಾರ್ಯಕ್ರಮವಾಗಿದೆ. ಮಕ್ಕಳು, ಹದಿಹರೆಯದ ಬಾಲಕಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿನ ಅಪೌಷ್ಟಿಕತೆಯ ಸವಾಲುಗಳನ್ನು ಪೌಷ್ಟಿಕತೆಯ ಅಂಶ ಮತ್ತು ವಿತರಣೆಯಲ್ಲಿ ವ್ಯೂಹಾತ್ಮಕ ಬದಲಾವಣೆಯ ಮೂಲಕ ಮತ್ತು ಆರೋಗ್ಯ, ಸ್ವಾಸ್ಥ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಪೋಷಿಸುವ ರೂಢಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ಏಕೀಕೃತ ಪರಿಸರ ವ್ಯವಸ್ಥೆಯನ್ನು ರೂಪಿಸುವ ಮೂಲಕ ಪರಿಹರಿಸಲು ಇದು ಪ್ರಯತ್ನಿಸುತ್ತದೆ. ಪೋಷಣ್ 2.0 ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದ ಅಡಿಯಲ್ಲಿ ಆಹಾರದ ಗುಣಮಟ್ಟ ಮತ್ತು ವಿತರಣೆಯನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತದೆ. ಪೋಷಣ್ 2.0 ಮೂರು ಪ್ರಮುಖ ಕಾರ್ಯಕ್ರಮಗಳು / ಯೋಜನೆಗಳು  ಅಂದರೆ, ಅಂಗನವಾಡಿ ಸೇವೆಗಳು, ಹದಿಹರೆಯದ ಬಾಲಕಿಯರ ಯೋಜನೆ ಮತ್ತು ಪೋಷಣ್ ಅಭಿಯಾನವನ್ನು ತನ್ನ ವ್ಯಾಪ್ತಿಗೆ ತರುತ್ತದೆ.
ಶಕ್ತಿ ಅಭಿಯಾನ ಸಮಗ್ರ ಆರೈಕೆ, ಸುರಕ್ಷತೆ, ರಕ್ಷಣೆ, ಪುನರ್ವಸತಿ ಮತ್ತು ತಮ್ಮ ಬದುಕಿನ ವಿವಿಧ ಹಂತಗಳ ಮೂಲಕ ಪ್ರಗತಿ ಹೊಂದುತ್ತಿರುವ ಮಹಿಳೆಯರಿಗೆ ಏಕೀಕೃತ ನಾಗರಿಕ-ಕೇಂದ್ರಿತ ಜೀವನಚಕ್ರದ ಬೆಂಬಲವನ್ನು ಕಲ್ಪಿಸುತ್ತದೆ. ಶಕ್ತಿ ಅಭಿಯಾನ 'ಸಂಬಾಲ್' ಮತ್ತು 'ಸಾಮರ್ಥ್ಯ'  ಎಂಬ ಎರಡು ಉಪ-ಯೋಜನೆಗಳನ್ನು ಹೊಂದಿದೆ. "ಸಂಬಾಲ್" ಉಪ-ಯೋಜನೆ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಇದ್ದರೆ, "ಸಾಮರ್ಥ್ಯ" ಉಪ-ಯೋಜನೆ ಮಹಿಳೆಯರ ಸಬಲೀಕರಣಕ್ಕಾಗಿದೆ. 
ವಾತ್ಸಲ್ಯ ಅಭಿಯಾನದ ಉದ್ದೇಶವೆಂದರೆ ಭಾರತದ ಪ್ರತಿ ಮಗುವಿಗೆ ಆರೋಗ್ಯಕರ ಮತ್ತು ಸಂತೋಷದ ಬಾಲ್ಯವನ್ನು ಖಾತ್ರಿಪಡಿಸುವುದಾಗಿದೆ; ಮಕ್ಕಳ ಅಭಿವೃದ್ಧಿಗಾಗಿ ಸೂಕ್ಷ್ಮ, ಬೆಂಬಲಿತ ಮತ್ತು ಸಂಯೋಜಿತ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು; ಬಾಲನ್ಯಾಯ ಕಾಯ್ದೆ 2015 ನ್ನು ಕಡ್ಡಾಯ ಮಾಡಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡುವುದು; ಎಸ್.ಡಿ.ಜಿ ಗುರಿಗಳನ್ನು ಸಾಧಿಸುವುದು. ವಾತ್ಸಲ್ಯ ಅಭಿಯಾನದ ಅಡಿಯಲ್ಲಿನ ಘಟಕಗಳಲ್ಲಿ  ಶಾಸನಬದ್ಧ ಸಂಸ್ಥೆಗಳು, ಸೇವಾ ವಿತರಣಾ ರಚನೆಗಳು, ಸಾಂಸ್ಥಿಕ ಆರೈಕೆ / ಸೇವೆಗಳು; ಸಾಂಸ್ಥಿಕವಲ್ಲದ ಸಮುದಾಯ ಆಧಾರಿತ ಆರೈಕೆ; ತುರ್ತು ಸಂಪರ್ಕ ಸೇವೆಗಳು; ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಸೇರಿವೆ. 
ಅಂಬ್ರೆಲ್ಲಾ ಅಭಿಯಾನಗಳ ಅಡಿಯಲ್ಲಿನ ಯೋಜನೆಗಳು ಕೇಂದ್ರ ಪ್ರಾಯೋಜಿತ ಯೋಜನೆಗಳಾಗಿವೆ, ಇವುಗಳನ್ನು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ವೆಚ್ಚ ಹಂಚಿಕೆಯ ಆಧಾರದ ಮೇಲೆ ವೆಚ್ಚ ಹಂಚಿಕೆ ಮಾನದಂಡಗಳ ಪ್ರಕಾರ ಅನುಷ್ಠಾನಗೊಳಿಸುತ್ತವೆ. ಯೋಜನಾ ಮಾರ್ಗಸೂಚಿಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಸಚಿವಾಲಯದ 3 ಅಂಬ್ರೆಲಾ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳನ್ನು ಸಂವೇದನಾಶೀಲಗೊಳಿಸುವುದು ವಲಯ ಸಮ್ಮೇಳನಗಳ ಉದ್ದೇಶವಾಗಿದೆ, ಇದು ಮುಂದಿನ 5 ವರ್ಷಗಳಲ್ಲಿ ಸಹಕಾರ ಒಕ್ಕೂಟ ವ್ಯವಸ್ಥೆಯ ನಿಜವಾದ ಸ್ಫೂರ್ತಿಯೊಂದಿಗೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅನುವು ಮಾಡಿಕೊಡುತ್ತದೆ ಮತ್ತು ಅಭಿಯಾನಗಳ ಅಡಿಯಲ್ಲಿ ಕಲ್ಪಿಸಲಾದ ಪರಿವರ್ತನಾತ್ಮಕ ಸಾಮಾಜಿಕ ಬದಲಾವಣೆಗಳನ್ನು ದೇಶದ ಮಹಿಳೆಯರು ಮತ್ತು ಮಕ್ಕಳ ಅನುಕೂಲಕ್ಕಾಗಿ ಸಾಧಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತದೆ.
ಸಚಿವಾಲಯದ ವಲಯ ಸಮ್ಮೇಳನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತೆಲಂಗಾಣ, ತಮಿಳುನಾಡು, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪಗಳೊಂದಿಗೆ ದಿನಾಂಕ 04.04.2022 ರಂದು ಬೆಂಗಳೂರು ನಗರದಲ್ಲಿ ನಡೆಯಲಿದೆ.  
 

***



(Release ID: 1812964) Visitor Counter : 170


Read this release in: English